News Karnataka Kannada
Monday, May 06 2024
ಹಾಸನ

ಒಂದು ವೋಟಿಗೆ ೨-೩ ಸಾವಿರ ಆಮಿಷ: ರಾಜ್ಯ ಚುನಾವಣೆ ಆಯೊಗಕ್ಕೆ ದೂರು

I will bring the JD(S) B form from Hassan.
Photo Credit : News Kannada

ಹಾಸನ: ವಿಧಾನಸಭೆ ಚುನಾವಣೆ ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಸನ, ಅರಸೀಕೆರೆ, ಬೇಲೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಚುನಾ ವಣಾ ಅಕ್ರಮ ನಡೆಯುತ್ತಿದ್ದು ಒಂದು ವೋಟಿಗೆ ೨-೩ ಸಾವಿರ ರೂಗಳ ಆಮಿಷ ಮತದಾರರಿಗೆ ಒಡ್ಡಲಾಗುತ್ತಿದೆ. ಮತದಾನ ಮಾಡುವ ವೇಳೆ ಫೋಟೋ ತೆಗೆದು ತೋರಿಸಬೇಕು ಎಂಬ ನಿಯಮವನ್ನು ಕೆಲವರು ಹೇರಿದ್ದು ಯಾವುದೇ ಕಾರಣಕ್ಕೂ ಮತದಾನ ಕೇಂದ್ರಕ್ಕೆ ಮೊಬೈಲ್ ನೊಂದಿಗೆ ಪ್ರವೇಶವನ್ನು ನೀಡಬಾರದು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಚುನಾವಣಾ ಆಯೋಗಕ್ಕೆ ಹಾಗೂ ಜಿಲ್ಲಾಧಿ ಕಾರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು.

ಕೆಲವರು ಸೋಲಿನ ಭೀತಿಯಿಂದ ಮತದಾರರಿಗೆ ಹಣದ ಆಮೀಷವನ್ನು ಒಡ್ಡುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಎರಡು ರಾಷ್ಟ್ರೀಯ ಪಕ್ಷಗಳು ೧೨೦ ರಿಂದ ೧೪೦ ಸೀಟ್ಗಳನ್ನು ಗೆಲ್ಲುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಭರವಸೆ ನೀಡಿದ್ದು ಕಳೆದ ೬೦ ವರ್ಷ ಜನರಿಗ ನೀಡದ ಗ್ಯಾರಂಟಿಯನ್ನು ಈಗ ಕೊಡಲು ಹೊರಟಿದೆ ಅದು ಸಾಧ್ಯವಿಲ್ಲ ಎಂದರು.

ಜಿಲ್ಲೆಯಲ್ಲಿ ಕುಟುಂಬ ರಾಜ ಕಾರಣ ಕೊನೆಯಾಗಬೇಕು ಎಂದು ಕಾಂಗ್ರೆಸ್  ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗ ಪ್ರಚಾರದಲ್ಲಿ ಹೇಳುತ್ತಾರೆ ಆದರೆ ಆ ಪಕ್ಷದಿಂದಲೇ ಕುಟುಂಬ ರಾಜಕಾರಣ ಶುರುವಾಗಿದ್ದು ಕಳೆದ ಬಾರಿಯ ಸಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿದ್ದಿದ್ದೆ ಅವರಿಂದ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ಕೆಲಸ ಮಾಡಲು ಬಿಟ್ಟಿ‌ದ್ದರೆ ಐದು ವರ್ಷ ಸಂಪೂರ್ಣವಾಗಿ ಅಧಿಕಾರ ನಡೆಸಬಹುದಾಗಿತ್ತು ಅಂದು ಜೋಡೆತ್ತು ಎಂದು ಹಾಡಿ ಹೋಗಳಿದರೂ ಆದರೆ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ಕೆಲಸ ಮಾಡಲು ಬಿಡಲಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆಯ ರಾಜಕಾರಣ ಮಾಡುತ್ತಿವೆ, ಕೋಲಾ ರದಲ್ಲಿ ನಾಲ್ಕು ಕಡೆ ಹೊಂದಾಣಿಕೆ ಮಾಡಿಕೊಂಡಿದ್ದು ಇವರಿಂದ ಪ್ರಾದೇಶಿಕ ಪಕ್ಷಗಳು ನೈತಿಕತೆಯ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.

೧೫ ವರ್ಷ ಗಿಣಿಯಂತೆ ಸಾಕಿದ ಶಿವಲಿಂಗೇಗೌಡರು ಎರಡು ವರ್ಷ ಪಕ್ಷ ಬಿಡಲು ಸಮಯ ಪಡೆದರು ಅವರಿಗೆ ಹೊಟ್ಟೆ ತುಂಬಿದ್ದು ಅಲ್ಲಿ ಸ್ವಲ್ಪ ಹಣ ಮಾಡಿಕೊಳ್ಳಲು ಹೋಗಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ -ನಾಯಕರು, ಜೆಡಿಎಸ್ ಈ ಬಾರಿ ೨೦ ಸೀಟು ಗೆಲ್ಲುವುದು ಕಷ್ಟ ಎಂದು ಹೇಳಿದ್ದಾರೆ ಆದರೆ ನಾವು ೧೨೦ ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಕಳೆದ ಬಾರಿಯೂ ಇದೇ ರೀತಿ ಟೀಕೆ ಮಾಡಿದರು ಎಷ್ಟು ಸ್ಥಾನಗಳು ಗೆಲ್ಲ ಲಾಯಿತು ಎಂದು ಎಲ್ಲರಿಗೂ ತಿಳಿ ದಿದೆ ಎಂದು ತಿರುಗೇಟು ನೀಡಿದರು.

ನಮ್ಮ ಪಕ್ಷದಲ್ಲಿ ಘಟಾನುಘಟಿ ನಾಯಕರು ಸಿನಿಮಾನಟರು ಪ್ರಚಾರಕ್ಕೆ ಇಲ್ಲ ದೇವೇಗೌಡರು ಕುಮಾರಣ್ಣನೇ ನಮಗೆ ಸ್ಟಾರ್ ಪ್ರಚಾರಕರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಣ್ಣನನ್ನು ಬ್ರದರ್ ಎಂದು ಕಡತಗಳಿಗೆ ಸಹಿ ಹಾಕಿಸಿಕೊಂಡರು ಇದೀಗ ಜೆಡಿಎಸ್ ಪಕ್ಷವನ್ನು ಮುಗಿಸುವ ಮಾತನಾಡುತ್ತಿದ್ದಾರೆ. ಅರಕಲಗೂಡಿನ ಎ ಟಿ ರಾಮಸ್ವಾಮಿ ಅವರನ್ನು ತಿರುಗಾಡಿಸಿ ನಂತರ ಕೈಕೊಟ್ಟರು ಎಂದು ಟೀಕಿಸಿದರು.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಜಪ ಮಾಡದಿದ್ದರೆ ನಿದ್ದೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ ರೇವಣ್ಣ ಅವರು ದೇಶದ ಪ್ರಧಾನಿ ಸಹ ಜೆಡಿಎಸ್ ಜಪ ಮಾಡುವಾಗ ಇವರು ಯಾವ ಲೆಕ್ಕ ಎಂದು ಹೇಳಿದರು.

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಯನ್ನು ಕರೆಸಿ ಹಾಸನದಲ್ಲಿ ಜೆಡಿಎಸ್ ಅನ್ನು ಟೀಕಿಸಿದರು ಆದ್ದರಿಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲು ಕಾರಣವಾಯಿತು ಇದೀಗ ಅದೇ ತಪ್ಪನ್ನು ಕಾಂಗ್ರೆಸ್ ಮಾಡುತ್ತಿದ್ದು ಕೋಮುವಾದಿ ಪಕ್ಷ ದೊಂದಿಗೆ ಹೊಂದಾಣಿಕೆ ಮಾಡಿ ಕೊಂಡಿದೆ ಎಂದು ಕಿಡಿಕಾರಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ವರೂಪ್ ಅವರು ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ ಭವಾನಿ ಅವರು ಸ್ವರೂಪ್ ರನ್ನು ಮೂರನೇ ಮಗ ಎಂದು ಹೇಳಿದ್ದಾರೆ ಜಿಲ್ಲೆಯ ಹಾಗೂ ನಗರದ ಅಭಿವೃದ್ಧಿಗೆ ಅಡ್ಡಿ ಮಾಡುವವರು ಕುತಂತ್ರಿಗಳನ್ನು ಸೋಲಿಸಬೇಕು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು