ಹಾಸನ

ಮಲೆನಾಡು ರಸ್ತೆಗಳಿಗೆ ಕಳಪೆ ಕಾಮಗಾರಿ- ಜನತೆ ಆಕ್ರೋಶ

ಬೇಲೂರು: ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ತೀವ್ರವಾಗಿ ಹಾಳಾಗಿದ್ದು, ತಾತ್ಕಾಲಿಕವಾಗಿ ನಡೆಯುತ್ತಿರುವ ಗುಂಡಿ ಮುಚ್ಚುವ ತೇಪೆ ಕಾಮಗಾರಿ ಅತ್ಯಂತ ಕಳಪೆ ಮತ್ತು ವಿಳಂಭವಾಗಿ ಕೂಡಿದೆ. ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ. ರಸ್ತೆಯ ಸಂಪೂರ್ಣ ದೂಳಿನಿಂದ ಜನತೆ ಅನಾರೋಗ್ಯದಿಂದ ನರಳುವ ಹೀನ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರವೇ ರಸ್ತೆ ಕಾಮಗಾರಿಯನ್ನು ತ್ವರೀತ ಮತ್ತು ಗುಣಮಟ್ಟದಿಂದ ನಡೆಸಬೇಕು ಬಿಕ್ಕೋಡು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮ ಪಂಚಾ ಯಿತಿ ಸದಸ್ಯರಾದ ಮೋಹನ್ ಮತ್ತು ಶ್ರೀನಿವಾಸ್ ಅವರು ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ಕಳೆದ ನಾಲ್ಕು ವರ್ಷದಿಂದ ತೀವ್ರವಾಗಿ ಹದಗೆಟ್ಟಿದೆ. ಕಾರಣ ಇಲ್ಲಿ ಅತಿ ಭಾರವನ್ನು ಹೊತ್ತು ಬೃಹತ್ ಲಾರಿಗಳ ಸಂಚಾರದಿಂದ ರಸ್ತೆ ಗುಂಡಿ ಬಿದ್ದು ಮಳೆಗಾಲದಲ್ಲಿ ಸಂಚಾರ ಅಸಾದ್ಯವಾಗಿದೆ.

ಈ ಬಗ್ಗೆ ಎಲ್ಲರೂ ನಡೆಸಿದ ಹೋರಾಟ ಫಲದಿಂದ ಗುಂಡಿ ಮುಚ್ಚಲು ರೂ ೨.೫ ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಟೆಂಡರ್ ಪಡೆದ ಗುತ್ತಿಗೆದಾರನ ಅಸಡ್ಡೆಯಿಂದ ಗುಂಡಿ ಮುಚ್ಚುವ ಕೆಲಸ ತೀರ ಕಳೆಪೆಯಿಂದ ಕೂಡಿದೆ. ಇದಕ್ಕೆ ಉದಾಹರಣೆ ಎಂಬಂತೆ ಬಿಕ್ಕೋಡು ಟೌನ್ ನಡುವೆ ಹಾದು ಹೋಗುವ ಮಾರ್ಗಕ್ಕೆ ಕಳೆದ ೧೫ ದಿನದ ಹಿಂದೆ ರಸ್ತೆಯನ್ನು ಬಗೆದು ದೊಡ್ಡ-ದೊಡ್ಡ ಜಲ್ಲಿ ಹಾಕಿದವರು ನಾಪತ್ತೆಯಾಗಿದ್ದಾರೆ. ಬರುವ ವಾಹನಗಳ ಟೈರಿಗೆ ಸಿಕ್ಕ ಜಲ್ಲಿಕಲ್ಲು ಮನೆಗಳ ಗಾಜಿಗೆ ಮತ್ತು ಪಾದಚಾರಿಗಳಿಗೆ ಗಾಯ ಉಂಟು ಮಾಡುತ್ತಿದೆ. ಅಲ್ಲದೆ ಸುಡು ಬಿಸಿಲಿನಲ್ಲಿ ದೂಳಿನಿಂದ ಜನರು ನಿತ್ಯ ಆಸ್ಪತ್ರೆಗೆ ಅಲೆಯುವ ಹೀನ ಸ್ಥಿತಿ ನಿರ್ಮಾಣವಾಗಿದೆ. ನೆಪ ಮಾತ್ರಕ್ಕೆ ರಸ್ತೆಗೆ ನೀರು ಹಾಕುತ್ತಾರೆ. ಕೇಳಿದರೆ ಗುತ್ತಿಗೆದಾರ ಉಡಾಪೆಯಿಂದ ಮಾತನಾಡುತ್ತಾರೆ. ಇನ್ನು ಕಾಮಗಾರಿ ಇಂಜಿನಿಯರ್ ಗುಂಡಿ ಮುಚ್ಚುವ ಕೆಲಸ ಕಳಪೆಯಿಂದ ಕೂಡಿದೆ ನಾನು ಅನುಮತಿ ನೀಡಲ್ಲ ಎನ್ನುತ್ತಾರೆ. ನಾವುಗಳು ಯಾರಿಗೆ ದೂರು ಹೇಳಬೇಕು, ಜನಪ್ರತಿನಿಧಿಗಳು ಓಟು ಕೇಳಲು ಮನೆ-ಮನೆಗೆ ತಿರುಗುತ್ತಿದ್ದಾರೆ. ಇಲ್ಲಿ ಯಾರು ಸಾಯಬೇಕು ಎಂದು ತಿಳಿದಿಲ್ಲ ಎಂದು ಪತ್ರಿಕೆಯೊಂದಿಗೆ ತಮ್ಮ ಆಳಲು ಹೇಳಿಕೊಂಡರು.

ಕಳೆದ ೨ ತಿಂಗಳಿಂದ ಆರಂಭವಾಗಿರುವ ಗುಂಡಿ ಮುಚ್ಚುವ ಕೆಲಸಕ್ಕೆ ಕೀಮೀ ಒಂದಕ್ಕೆ ರೂ ೯೬ ಲಕ್ಷ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಗುತ್ತಿಗೆದಾರ ತನಗೆ ಇಷ್ಟಬಂದ ರೀತಿಯಲ್ಲಿ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಬೇಲೂರು-ಬಿಕ್ಕೋಡು-ಸಕಲೇಶಪುರ ರಸ್ತೆ ರಾಜ್ಯ ಹೆದ್ದಾರಿಗೆ ಸಂಬಂಧ ಪಟ್ಟ ಕಾರಣ ಅಧಿಕಾರಿಗಳು ಮೌನ ಮುರಿದು ತ್ವರಿತ ಕಾಮಗಾರಿಗೆ ನಡೆಸಬೇಕು ಇಲ್ಲವಾದರೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅಬ್ದುಲ್ ರಜಾಕ್,ಪಿಂಟೋ, ರಂಗಸ್ವಾಮಿ, ಧರ್ಮ, ಗಣೇಶ್, ಅರೀಶ್, ದೇವರಾಜ್, ಕಾಂತರಾಜ್, ವಸಂತ, ಪಾಲಾಕ್ಷ ಸೇರಿದಂತೆ ಇನ್ನು ಮುಂತಾದವರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.

Sneha Gowda

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

8 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

8 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

9 hours ago