Categories: ಹಾಸನ

ಮೋದಿಜೀ 9 ವರ್ಷಗಳ ಆಡಳಿತ ಸಾಧನೆಯ ಸಾರ್ಥಕತೆ ಮೆರೆದಿದೆ: ಲೋಹಿತ್‌ಜಂಬರಡಿ

ಹಾಸನ: ೨೦೧೩ನೇ ವರ್ಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಸರ್ಕಾರ ಒಂಬತ್ತು ವರ್ಷಗಳ ಸಾಧನೆಯ ಸಾರ್ಥಕತೆಯನ್ನು ಮೆರೆದಿದೆ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಲೋಹಿತ್ ಜಂಬರಡಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತ ನಾಡಿ, ದೇಶವು ಅಂತರ್ಗತ, ಪ್ರಗತಿಪರ, ಮತ್ತು ಸಮರ್ಥನೀಯ ಅಭಿವೃದ್ಧಿ ಸಾಧಿಸುವಲ್ಲಿ ವಿಶ್ವವಂದ್ಯ ನಾಯಕ ಮೋದಿಜಿ ಬದ್ಧತೆಯ ಕೊಡುಗೆ ನೀಡಿದ್ದಾರೆ.ಎಲ್ಲಾ ನಾಗರಿ ಕರಿಗೆ ಅವಕಾಶ ನೀಡುವ ಅಭಿ ವೃದ್ಧಿಯ ರಾಜಕೀಯ, ವಿಕಾಸವಾದ ವನ್ನು ಮೋದಿಜಿ ಅವರ ಬಿಜೆಪಿ ಸರಕಾರ ತನ್ನದಾಗಿಸಿಕೊಂಡಿತ್ತು. ೨೦೧೪ ರಲ್ಲಿ, ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಭಾರತವನ್ನು ಪ್ರಥಮ ಸ್ಥಾನದಲ್ಲಿ ಇಡಲು ಶ್ರಮಿಸಿದ್ದಾರೆ, ಪ್ರತಿ ನೀತಿ ನಿರೂಪಣೆ ಮತ್ತು ಕ್ರಿಯೆಯು ಈ ಸಂಕಲ್ಪದಡಿ ನಿರೂಪಿತಗೊಂಡಿತ್ತು ಎಂದರು.

ಆಂತರಿಕ ಭದ್ರತೆ ಹಾಗೂ ಬಾಹ್ಯ ಎರಡದ ನಿರ್ವಹಣೆ, ಆರ್ಥಿಕ ನಿರ್ವಹಣೆ, ಸಬಲೀಕರಣ ಯೋಜನೆಗಳು, ಅಂಚಿನಲ್ಲಿರುವ ಗುಂಪುಗಳಿಗೆ ಆದ್ಯತೆ ಕೊಡಲಾಯಿತು. ಪ್ರಧಾನಿ ಮೋದಿಯವರ ಸರ್ಕಾರ ಸವಾಲಿನ ಗುರಿ ನಿಗದಿಪಡಿಸಿ ನಿಗದಿತ ಗಡುವಿನಲ್ಲಿ ಅದನ್ನು ಸಾಧಿಸುತ್ತ ಸಾಗಿಬಂದಿದೆ ಎಂದು ತಿಳಿಸಿದರು.

ಕೋವಿಡ್ ಲಸಿಕೀಕರಣದ ಅವಧಿಯಲ್ಲೇ ವ್ಯಕ್ತವಾಗಿತ್ತು, ರಫ್ತು, ಡಿಜಿಟಲ್ ಕ್ರಾಂತಿ, ಗ್ರಾಮೀಣ ಪ್ರದೇಶದ ವಿದ್ಯುದೀಕರಣ, ಮನೆ ಮನೆಗೆ ನಲ್ಲಿ ನೀರು ಸೇರಿ ಎಲ್ಲ ಕ್ಷೇತ್ರ ಗಳಲ್ಲಿ ಇದು ಸಾಧ್ಯವಾಗಿದೆ. ಜನ್ ಧನ್, ಆಧಾರ್ ಮತ್ತು ಮೊಬೈಲ್ ಪರಸ್ಪರ ಹೊಂದಿಸಿ ಮಧ್ಯವರ್ತಿ ಗಳಿಲ್ಲದೆ ನೇರ ಹಣ ವರ್ಗಾವಣೆಗೆ (ಡಿಬಿಟಿ) ಮೋದಿಜಿ ಚಾಲನೆ ಕೊಟ್ಟರು, ಪ್ರಧಾನಿ ಮೋದಿಯವರ ಅತ್ಯುತ್ಸಾಹಿ ನಾಯಕತ್ವದ ಅಡಿಯಲ್ಲಿ ದೇಶದ ಏಳಿಗೆಗಾಗಿ ಮೂಲ ಸೌಕರ್ಯವು ವೇಗವಾಗಿ ಬೆಳೆಯು ತ್ತಿದೆ. ಹಿಂದಿನ ಆಡಳಿತದಲ್ಲಿ ಇದಕ್ಕೆ ತದ್ವಿರುದ್ಧದ ದೂರದೃಷ್ಟಿ ಇಲ್ಲದ ಕಾಮಗಾರಿಗಳು ನಡೆಯುತ್ತಿದ್ದವು ಎಂದರು.

ಕಳೆದ ಒಂಬತ್ತು ವರ್ಷಗಳಲ್ಲಿ ಎಲ್ಲಾ ಭಾರತೀಯರನ್ನು ಪ್ರೇರೇಪಿ ಸುವ ಮತ್ತು ದೊಡ್ಡ ಕನಸು ಮತ್ತು ಆಕಾಂಕ್ಷೆ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ, ಜಗತ್ತು ಈಗ ಭಾರತದ ಅಭಿವೃದ್ಧಿಯತ್ತ ನೋಡು ತ್ತಿದೆ. ಜೂನ್ ೨೧ ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿ ಸಲಾಗಿದೆ. ಭಾರತೀಯರಿಗೆ ಜಾಗತಿಕ ಮನ್ನಣೆ ಲಭಿಸಿದೆ. ಭಾರತದ ಬೆಳವಣಿಗೆಯ ಭಾಗವಾಗಿ ಭಾರತೀಯ, ’ಅಮೃತ’ ಸಾಲ’ದಲ್ಲಿ ಏನೇನು ಮಾಡಬಹುದು ಎಂಬ ನೀಲನಕ್ಷೆ ಸಿದ್ದಗೊಂಡಿದೆ. ಇದು ಮೋದಿಯವರ ದೂರದೃಷ್ಟಿಯ ನಾಯಕತ್ವದ ಫಲವಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಶಾಸಕ ಸಿಮೆಂಟ್‌ಮಂಜು, ಪ್ರಸನ್ನಕುಮಾರ್, ಹೈನೆಟ್‌ವಿಜಯ್ ಇನ್ನಿತರರು ಇದ್ದರು.

Sneha Gowda

Recent Posts

ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ

ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು…

2 hours ago

ಮುರುಘಾ ಶರಣರಂತೆ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ: ಮಾರಸಂದ್ರ ಮುನಿಯಪ್ಪ

'ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವಂತೆ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ…

2 hours ago

ಯುವತಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಹರಿಬಿಟ್ಟ ನಾಲ್ವರು ಅಪ್ರಾಪ್ತರ ಬಂಧನ

ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟ ಘಟನೆ ಏಪ್ರಿಲ್ 21 ರಂದು…

2 hours ago

ಸ್ವತಂತ್ರರಾಗಿ ಬದುಕಲು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿ: ಕೆ. ಬುಕ್ಕಾ ಮನವಿ

ಜಿಲ್ಲೆಯ ಜ‌ನ ಸ್ವತಂತ್ರರಾಗಿ ಬದುಕಬೇಕಾದರೆ‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತ ಹಾಕಬೇಕೆಂದು ಪಕ್ಷೇತರ ಅಭ್ಯರ್ಥಿ ಜೈರಾಜ ಕೆ.…

3 hours ago

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ

ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

3 hours ago

ಪಾದಯಾತ್ರೆ ನಡೆಸಿ ಮತಯಾಚಿಸಿದ ಶಾಸಕ ಅಶೋಕ್ ಮನಗೂಳಿ

ಭಾನುವಾರ ಸಂಜೆ ಅಲ್ಮೆಲ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮತ್ತು ಶಾಸಕ ಅಶೋಕ ಮನಗೂಳಿಯವರು ಪಾದಯಾತ್ರೆ ನಡೆಸಿ ಮತಯಾಚಿಸಿದರು.

3 hours ago