ಹಾಸನ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಸದಸ್ಯತ್ವ ರದ್ದುಗೊಳಿಸಿರುವ ಕ್ರಮ ಖಂಡಿಸಿ ಎನ್.ಎಸ್.ಯು.ಐ.ವತಿಯಿಂದ ರೈಲ್ ರೋಕೋ ಚಳುವಳಿಯಲ್ಲಿ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಮುಂದಾದಗ ಪೊಲೀಸರು ತಡೆದು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಮತ್ತೆ ವಾಪಸ್ ಬಿಡಲಾಗಿದೆ.
ನಗರದ ಬಿ.ಎಂ ರಸ್ತೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮದ್ಯಾಹ್ನ ಹೊರಟ ಪ್ರತಿಭಟನಾ ಮೆರವಣಿಗೆಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈಲ್ವೆ ನಿಲ್ದಾಣದವರೆಗೂ ಆಕ್ರೋಶ ವ್ಯಕ್ತಪಡಿಸಿದರು.
ನಂತರ ರೈಲ್ವೆ ನಿಲ್ದಾಣದ ಒಳಗೆ ಹೋಗಲು ಯತ್ನಿಸಿದ ಪ್ರತಿಭಟನಾ ಕರಾರನ್ನು ಪೊಲೀಸರು ತಡೆದು ಅವರನ್ನೆಲ್ಲಾ ಬಂಧಿಸಿದ ಘಟನೆ ನಡೆಯಿತು. ಬಂಧಿತ ಪ್ರತಿಭಟನಾ ಕಾರರು ಪೊಲೀಸ್ ವ್ಯಾನ್ ನಲ್ಲಿಯೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದೆ ವೇಳೆ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸುಪ್ರೀತ್ ಗೌಡ ಇತರರು ಉಪಸ್ಥಿತರಿದ್ದರು.