ಬೇಲೂರು: ಇತ್ತಿಚೀನ ದಿನಗಳಲ್ಲಿ ಪುಸ್ತಕದ ಅಂಗಡಿಗಳಿಗಿಂತ ಮದ್ಯದ ಅಂಗಡಿ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಅದ್ದರಿಂದ ಎಲ್ಲರೂ ಪುಸ್ತಕ ಓದಬೇಕು ಒಳ್ಳೆಯ ಪುಸ್ತಕ ಮನುಷ್ಯನ ಬದುಕನ್ನೇ ಬದಲಾಯಿಸುತ್ತದೆ ಎಂದು ಜಿಲ್ಲಾ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ ಶೈಲಜಾ ಹಾಸನ ಅವರು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಆಶ್ರಯದಲ್ಲಿ ಮಧುಮಾಲತಿ ರುದ್ರೇಶ್ ಅವರ ಸ್ವಾತಿ ಹನಿ ಪ್ರೀತಿಮುತ್ತಾದಂತೆ ಹಾಗೂ ಕು. ಶಶಿ ಎಂ.ಟಿ.ಮಂಡಲ ಮನೆ ಅವರ ಬೆಳ್ಳಿ ಬೆಳಕು ಕವನ ಸಂಕಲನ ಬಿಡುಗಡೆ ಸಮಾರಂಭ ಕಾರ್ಯವನ್ನು ಉದ್ಘಾಟಿಸಿ ಮಾತನಾ ಡಿದ ಅವರು ಐತಿಹಾಸಿಕ ಬೇಲೂರಿನಲ್ಲಿ ಅನೇಕ ಸಾಹಿತಿಗಳು, ಕವಿಗಳಿದ್ದಾರೆ ಇಂದು ಮಧುಮಾಲತಿ, ಶಶಿ ಅವರು ಸೇರ್ಪಡೆ ಯಾಗು ತ್ತಿರುವುದು ಸಂತೋಷವಾಗಿದೆ.
ಮನುಷ್ಯನ ಅಂತರಾಳದಲ್ಲಿ ವಿಭಿನ್ನ ಭಾವನೆಯ ಗುಚ್ಛವಿದ್ದು, ಅದನ್ನು ಹೊರಗೆಡವಿ ಲೋಕ ಹಿತಕ್ಕೆ ಮುಡಿಸಿ ಮುಕ್ತಿ ಹೊಂದುವುದೇ ನಿಸ್ವಾರ್ಥ ಬದುಕಾಗಿದೆ. ಓದು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದನ್ನು ಕಲಿಸುತ್ತದೆ. ಇಂದಿನ ಮಕ್ಕಳಿಗೆ ಕಂಪ್ಯೂ ಟರ್, ಮೊಬೈಲ್ ಅಟ್ಯಾಚ್ಮೆಂಟ್ ಜಾಸ್ತಿ ಇರುತ್ತದೆ. ಪುಸ್ತಕ ಓದುವ ಹವ್ಯಾಸ ಕಡಿಮೆ ಇರುತ್ತದೆ. ಪೋಷಕರು ಮಕ್ಕಳಿಗೆ ಬಾಲ್ಯದಲ್ಲೇ ಅವರ ವಯಸ್ಸಿಗೆ ಅನುಗುಣವಾಗಿ ಮೊಬೈಲ್ ಬದಲಿಗೆ ಪುಸ್ತಕಗಳನ್ನು ಕೊಡಿಸಿ ಓದಲು ಪ್ರೇರೆಪಿಸಬೇಕು. ಜೊತೆಗೆ ಪೋಷಕರು ಸಹ ಅವರೊಟ್ಟಿಗೆ ಓದುವ ಅಭ್ಯಾಸ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದರು.
ಕೃತಿ ಬಿಡುಗಡೆ ಹಾಗೂ ಪರಿಚಯವನ್ನು ಕಸಾಪ ಮಾಜಿ ಅಧ್ಯಕ್ಷ ಟಿ.ಡಿ.ತಮ್ಮಣ್ಣಗೌಡ ಮತ್ತು ಮೈಸೂರಿನ ಸಾಹಿತಿ ಡಾ.ಅವರೇಕಾಡು ವಿಜಯಕುಮಾರ ಪರಿಚಯ ಮಾಡಿಕೊಟ್ಟರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕಸಾಪ ೮ ನೆಯ ಸಮ್ಮೇಳನದ ಸರ್ವಾಧ್ಯಕ್ಷೆ ಇಂದಿರಮ್ಮ, ಕಸಾಪ ಕೋಶಾಧ್ಯಕ್ಷ ಮಾ.ನ.ಮಂಜೇ ಗೌಡ. ಸಾಹಿತಿ ಸಂಶೋಧಕ ಡಾ.ಶ್ರೀ ವತ್ಸ ಎಸ್.ವಟಿ. ಸ.ಪ.ಪೂ.ಕಾಲೇಜು ಪ್ರಾಂಶುಪಾಲ ಎಸ್.ಗಣೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಮಾ.ಶಿವಮೂ ರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ. ಶಿವರಾಜು, ಆರ್.ಎಸ್. ಮಹೇಶ್, ಸಂಘಟನಾ ಕಾರ್ಯ ದರ್ಶಿ ಬೊಮ್ಮಡಿಹಳ್ಳಿ ಕುಮಾರ ಸ್ವಾಮಿ, ಸ್ವಾತಿಹನಿ ಪ್ರೀತಿಮುತ್ತಾ ದಂತೆ ಕವಯಿತ್ರಿ ಮಧುಮಾಲತಿ ರುದ್ರೇಶ್, ಬೆಳ್ಳಿ ಬೆಳಕು ಕವಯಿತ್ರಿ ಕು.ಶಶಿ ಎಂ.ಟಿ. ಮಂಡಲಮನೆ ಸೇರಿದಂತೆ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇದ್ದರು.