ಬೇಲೂರು : ಜಗತ್ಪ್ರಸಿದ್ಧ ಚನ್ನಕೇಶವಸ್ವಾಮಿಯ ಕಲ್ಯಾ ಣೋತ್ಸವ ದೇಗುಲದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
ಚನ್ನಕೇಶವ ದೇವರಿಗೂ ಸೌಮ್ಯನಾಯಕಿ, ರಂಗನಾಯಕಿ ಅಮ್ಮನವರಿಗೂ ಇಲ್ಲಿ ಕಲ್ಯಾಣ ಭಾಗ್ಯವಿದೆ. ಇದು ಪ್ರತಿವರ್ಷ ರಥೋ ತ್ಸವಕ್ಕೆ ಮುನ್ನ ನಡೆಸಲಾಗುತ್ತದೆ. ವಿವಾಹೋತ್ಸವ ನಡೆಯಿತು.
ಕಲ್ಯಾಣವು ಗಂಡು, ಹೆಣ್ಣಿನ ಕಡೆಯ ಹಿರಿಯರು ಒಪ್ಪಿಕೊಂಡು ನಡೆಸುವ ಒಪ್ಪಂದದ ಮದುವೆಯಂತೆ ನಡೆಸಲಾಯಿತು. ವಿದ್ಯುತ್ ದೀಪ ಇಲ್ಲದ ಅಂದಿನ ಕಾಲದಿಂದಲೂ ನಡೆದುಕೊಂಡ ಬಂದಂತಹ ಪದ್ಧತಿಯಲ್ಲೇ ಈಗಲೂ ವಿವಾಹ ಕಾರ್ಯಗಳೆಲ್ಲವೂ ಜರುಗಿಸಲಾಗಿದೆ. ದೇವರ ಕಲ್ಯಾಣದ ಪೂಜಾ ಕಾರ್ಯಗಳನ್ನು ರೋಹಿಣಿ ನಕ್ಷತ್ರದಲ್ಲಿ ಅರ್ಚಕ ಶ್ರೀನಿವಾಸಭಟ್ಟರು, ನರಸಿಂಹ ಪ್ರೀಯ ಭಟ್ಟರು ತಂಡ ವೈಷ್ಣವ ಪದ್ಧತಿಯಲ್ಲಿ ನಡೆಸಿದರು. ಸುಮಂಗಲಿಯರು ವಿವಾಹ ಪೂರ್ವಸಿದ್ಧತೆಗಳಾದ ಗೋಧಿ ಕಲ್ಲು, ಅರಿಶಿನ ಕುಟ್ಟುವಿಕೆಯನ್ನು ಸಂಪ್ರದಾಯಿಕ ಹಾಡುಗಳೊಂದಿಗೆ ನಡೆಸಿದರು.
ದೇಗುಲದ ಒಳ ಆವರಣದಲ್ಲಿ ವರ ಮತ್ತು ವಧು ಕಡೆಯಿಂದ ಸಂಬಂಧಮಾಲೆ ನಡೆಸುತ್ತಾರೆ. ನಂತರ ದೇಗುಲದ ಕಲ್ಯಾಣ ಮಂಟ ಪದಲ್ಲಿ ದೇವರು ದೇವತೆಯರನ್ನು ವಧೂ ವರರಂತೆ ಶೃಂಗಾರ ಮಾಡಿ ಪ್ರತಿಷ್ಠಾಪಿಸಿ ವಿವಾಹ ಶಾಸ್ತ್ರಗಳ ನಡೆಸಲಾಯಿತು. ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಚನ್ನಕೇಶವನಿಂದ ದೇವಿಯವರಿಗೆ ಮಾಂಗಲ್ಯ ಧಾರಣೆ ಜರುಗಿತು. ಆಗಮಿಸಿದ ವರಿಗೆಲ್ಲ ದಾಸೋಹ ಭವನದಲ್ಲಿ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಭಕ್ತ ಎ. ಲಕ್ಷ್ಮೀನರಸಿಂಹನ್ ಮತ್ತು ಮಕ್ಕಳು ವಿಜೃಂಭಣೆಯಿಂದ ಜರುಗಿದ ಕಲ್ಯಾಣೋತ್ಸವಕ್ಕೆ ೧ ಲಕ್ಷರೂ. ಪುಡವಟ್ಟು ಇಟ್ಟಿದ್ದರು.
ಕಲ್ಯಾಣೋತ್ಸವದಲ್ಲಿ ದೇಗು ಲದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಬ್.ಯೋಗೇಶ್, ವ್ಯವಸ್ಥಾ ಪನಾ ಸಮಿತಿ ಅಧ್ಯಕ್ಷ ಹೆಚ್.ಆರ್. ನಾರಾಯಣಸ್ವಾಮಿ, ಸದಸ್ಯರಾದ ಬಿ.ಆರ್. ಪ್ರಮೋದ್, ಹೆಚ್.ಆರ್.ರವಿಶಂಕರ್, ಬಿ.ಎನ್.ವಿಜಯಲಕ್ಷ್ಮಿ ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಭಕ್ತರು ಪಾಲ್ಗೊಂಡು ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.