News Karnataka Kannada
Wednesday, May 01 2024
ಹಾಸನ

ನಾನು ಸೋತು ಗೆದ್ದಿದ್ದೇನೆ, ರೇವಣ್ಣ ಗೆದ್ದು ಸೋತಿದ್ದಾರೆ- ಶ್ರೇಯಸ್ ಪಟೇಲ್

I have lost and won, Revanna has won and lost: Shreyas Patel
Photo Credit : News Kannada

ಹಾಸನ: ಹಾಸನದ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಟಕ್ಕರ್ ಕೊಟ್ಟ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪ್ರತಿಕ್ರಿಯೆ ನೀಡಿದ್ದು, ಸಂವಿಧಾನದಡಿ ಇಂದು ರೇವಣ್ಣ ಶಾಸಕರಾಗಿರಬಹುದು. ಆದರೆ ಹೊಳೆನರಸೀಪುರದ ಜನಕ್ಕೆ ನಾನೇ ಶಾಸಕ. ೫೦ ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದಿದ್ದೆ ಆದರೆ ಸಾಧ್ಯವಾಗಿಲ್ಲ. ೨೦೨೮ ರ ಚುನಾವಣೆಗೆ ನಾನು ನಾಳೆಯಿಂದಲೇ ಸಿದ್ಧನಾಗುತ್ತೇನೆ. ಜನತೆ ಜೊತೆ ಇದ್ದು ಕಷ್ಟ ಸುಖಕ್ಕೆ ಸ್ಪಂದಿಸುತ್ತೇನೆ. ನಾನು ಸೋತಿರಬಹುದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಡವರಿಗೆ ಏನು ತಲುಪಬೇಕೋ ಅದನ್ನ ತಲುಪಿಸುತ್ತೇನೆ ಎಂದು ಶ್ರೇಯಸ್ ಪಟೇಲ್ ಹೇಳಿದ್ದಾರೆ.

ರಾಜ್ಯದ ಜನ ನೋಡುವಂತೆ ಹೊಳೆನರಸೀಪುರದ ಜನ ನನಗೆ ಮತ ನೀಡಿದ್ದಾರೆ. ಹಣದ ಹೊಳೆ ಹರಿಸಿ ಹೆಂಡ, ಖಂಡದ ಆಸೆ ತೋರಿಸಿದರೂ ಜನ ನಮಗೆ ಮತ ನೀಡಿದ್ದಾರೆ. ಅವರು ಹಣದಿಂದ ಗೆದ್ದಿದ್ದಾರೆ ಹೊರತು ಪ್ರೀತಿ ವಿಶ್ವಾಸ ಅಭಿವೃದ್ಧಿಯಿಂದ ಗೆದ್ದಿಲ್ಲ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಅಧಿಕಾರಕ್ಕೆ ತರುತ್ತೇವೆ.

ನಾನು ಸೋತಿದ್ದೇನೆ ಎಂದು ಕುಗ್ಗುವುದಿಲ್ಲ, ಬೇಜಾರು ಇಲ್ಲ. ನಮ್ಮ ತಾಲೂಕಿನ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಮುಂದೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಿ. ನಾನು ಸೋತು ಗೆದ್ದಿದ್ದೇನೆ ರೇವಣ್ಣ ಗೆದ್ದು ಸೋತಿದ್ದಾರೆ ಎಂದು ಶ್ರೇಯಸ್ ಲೇವಡಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು