ಬೇಲೂರು: ರಾಗಿ ಮತ್ತು ಭತ್ತ ಖರೀದಿ ಕೇಂದ್ರದಲ್ಲಿ ಯಾವುದೇ ಲೋಪ ದೋಷ ಗಳು ಕಂಡುಬಾರದಂತೆ ಖರೀದಿ ಮಾಡಬೇಕು ಎಂದು ಶಾಸಕ ಎಸ್ ಲಿಂಗೇಶ್ ಸೂಚಿಸಿದ್ದಾರೆ.
ಇಲ್ಲಿನ ಎಪಿಎಂಸಿ ಆವರಣ ದಲ್ಲಿ ರಾಗಿ ಮತ್ತು ಭತ್ತ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು. ಬೆಳೆದ ಬೆಳೆಗೆ ಬೆಲೆ ಸಿಗದಿದ್ದಾಗ ಸರ್ಕಾರ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಬೆಳೆಯನ್ನು ಖರೀದಿಸುತ್ತದೆ, ಕಳೆದ ಬಾರಿ ಮದ್ಯವರ್ತಿಗಳಿಂದ ಖರೀದಿಸಿರುವ ಮತ್ತು ಹಣಕ್ಕಾಗಿ ರೈತರನ್ನು ಪೀಡಿಸಿರುವ ಘಟನೆ ಗಳು ಸಂಭವಿಸಿದ ಈ ಬಾರಿ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಅನಗತ್ಯ ಸಮಸ್ಯೆಗಳನ್ನು ಹೇಳದೆ ಪೂರಕವಾದ ವ್ಯವಸ್ಥೆ ಗಳನ್ನು ತಯಾರು ಮಾಡಿಕೊಳ್ಳ ಬೇಕು, ರೈತರನ್ನು ಯಾವುದೇ ಕಾರಣಕ್ಕೂ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಖರೀದಿ ಕೇಂದ್ರದ ಅಧಿಕಾರಿ ಸಾನ್ನಿ, ಮಾತನಾಡಿ, ರಾಗಿಯನ್ನು ೩೫೭೮ ರೂ ಬೆಂಬಲ ಬೆಲೆಗೆ ಖರೀದಿಸಲಾಗುತ್ತಿದ್ದು, ಈಗಾ ಗಲೇ ೩೨೩೦೨ ಕ್ವಿಂಟಾಲ್ ರಾಗಿ ನೀಡಲು ೨೨೫೨ ರೈತರು ನೊಂದಣಿ ಮಾಡಿಕೊಂಡಿದ್ದಾರೆ. ಸಾಮಾನ್ಯ ಭತ್ತಕ್ಕೆ ೨೦೪೦ರೂ ಮತ್ತು ಗ್ರೇಡ್ ಭತ್ತಕ್ಕೆ ೨೦೫೦ರೂ ಬೆಂಬಲ ಬೆಲೆ ನಿಗದಿಪಡಿಸಲಾ ಗಿದ್ದು, ೨೫೮೦ ಕ್ವಿಂಟಾಲ್ ಭತ ನೀಡಲು ೨೪ ರೈತರು ಮುಂದೆ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಹಶೀ ಲ್ದಾರ್ ರಮೇಶ್, ರೈತಸಂಘದ ಬಸವರಾಜು, ಜೆಡಿಎಸ್ ಮುಖಂಡ ತೊಚ ಅನಂತಸುಬ್ಬ ರಾಯ, ಶಿರಸ್ತೆದಾರ್ ಮಂಜು ನಾಥ್, ಕೃಷಿಇಲಾಖೆ ಕಟ್ಟಿಮನಿ ಹಾಗೂ ರೈತರು ಇದ್ದರು.