News Karnataka Kannada
Monday, April 29 2024
ಹಾಸನ

ಹೊಳೆನರಸೀಪುರ: ರಾಯಣ್ಣ ಕಂಚಿನ ಪ್ರತಿಮೆ ಅನಾವರಣ

holenarasipura-bronze-statue-of-rayanna-unveiled
Photo Credit : News Kannada

ಹೊಳೆನರಸೀಪುರ: ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಅಪ್ರತಿಮ ದೇಶ ಭಕ್ತ,ದೇಶ ಪ್ರೇಮಿ ಸಂಗೊಳ್ಳಿ ರಾಯಣ್ಣಯುವಜನತೆಗೆ ಸದಾ ಸ್ಪೂರ್ತಿ ಮತ್ತು ಪ್ರೇರಣೆ ಎಂದು, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

ಅವರು ಹಳ್ಳಿ ಮೈಸೂರು ಹೋಬಳಿ ಶ್ರವಣೂರುಗ್ರಾಮದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ನಂತರ, ಏರ್ಪಡಿಸಲಾಗಿದ್ದ ಸಮಾರೋಪ ಸಮಾರಂಭವನ್ನುಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಒಂದು ಸಾಮಾನ್ಯಕುಟುಂಬದಲ್ಲಿ ಜನಿಸಿ,ಕಿತ್ತೂರು ಸಂಸ್ಥಾನದ ಕಿತ್ತೂರು ರಾಣಿ ಚೆನ್ನಮ್ಮನವರ ಬಲಗೈ ಬಂಟನಾಗಿ, ನಂಬಿಕಸ್ತನಾಗಿ ಕಿತ್ತೂರನ್ನು ಬ್ರಿಟಿಷರಿಂದರಕ್ಷಿಸಲು ಚೆನ್ನಮ್ಮನವರೊಂದಿಗೆ ಕೈ ಜೋಡಿಸಿ ವೀರಯೋಧನಾಗಿ ಮೊದಲ ಬಾರಿಗೆ,ಬ್ರಿಟಿಷರ ವಿರುದ್ಧ ಹೋರಾಡಿ ವಿಜಯೋತ್ಸವವನ್ನು ಅಚರಿಸಿದ ಸಂಗೊಳ್ಳಿ ರಾಯಣ್ಣನಅಂತ್ಯ ಒಬ್ಬಅಪ್ರತಿಮದೇಶ ಭಕ್ತನಾಗಿರೂಪುಗೊಂಡು, ಕೊನೆಗೆ ತನ್ನವರಿಂದಲೇ ವಿಶ್ವಾಸ ದ್ರೋಹಕ್ಕೊಳಗಾಗಿ ಬ್ರಿಟಿಷ್ ಸರ್ಕಾರದಿಂದಗಲ್ಲು ಶಿಕ್ಷೆಗೆ ಗುರಿಯಾಗಿದ್ದು, ಭಾರತದ ಸ್ವಾತಂತ್ರ್ಯ ಸಂಗ್ರಾಮದಇತಿಹಾಸದ ಪುಟಗಳಲ್ಲಿ ಅಜರಾಮರವಾಗಿರುವುದು ಶ್ಲಾಘನೀಯಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು