News Karnataka Kannada
Sunday, April 28 2024
ಹಾಸನ

ಹಾಸನ: ಕಗ್ಗಂಟಾದ ಫಲಿತಾಂಶ, ಬೆಟ್ಟಿಂಗ್‌ಗೂ ನಿಲುಕದ ಲೆಕ್ಕಾಚಾರ

Ugly results, betting inaccessible calculations
Photo Credit : News Kannada

ಹಾಸನ: ಮಹತ್ವದ ೨೦೨೩ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಕಾರ್ಯ ಮುಕ್ತಾಯ ಗೊಂಡಿದ್ದು, ಇದೀಗ ರಾಜಕೀಯ ಪಕ್ಷಗಳಲ್ಲಿ ಹಾಗೂ ಜನರಲ್ಲಿ ಯಾರು ಗೆಲುವು ಪಡೆಯಲಿದ್ದಾರೆ ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.

ಹಾಸನ ಜಿಲ್ಲೆಯ ಮಟ್ಟಿಗೆ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಪ್ರತಿ ಕ್ಷೇತ್ರದಲ್ಲಿ ಯಾರ ಗೆಲುವಾಗಲಿದೆ.! ಯಾರೂ ಸೋಲನ್ನು ಅನುಭವಿ ಸಲಿದ್ದಾರೆ ಎಂಬ ಲೆಕ್ಕಾಚಾರ ಕಗ್ಗಂಟಾಗಿ ಮುಂದುವರೆದಿರುವ ನಡುವೆ ಚುನಾ ವಣೆ ಮುಗಿದ ಬಳಿಕ ಕೆಲ ಸಮೀಕ್ಷೆ ಹೊರಬಂದಿದ್ದರು ಮತಪೆಟ್ಟಿಗೆಯಲ್ಲಿ ಮತದಾರ ಯಾರಿಗೆ ಕೃಪೆ ತೋರಿ ದ್ದಾರೆ ಎಂಬ ಗೊಂದಲವಿದೆ. ಈಗಾ ಗಲೇ ಮತಯಂತ್ರದಲ್ಲಿ ಎಲ್ಲರ ಭವಿಷ್ಯ ಭದ್ರವಾಗಿದ್ದು ಜನರಿಗೂ, ಅಭ್ಯರ್ಥಿ, ಕಾರ್ಯಕರ್ತರು, ಮುಖಂಡ ರಿಗೂ ಯಾರು ಗೆಲುವು ಪಡೆಯುವರು ಎಂಬ ಲೆಕ್ಕಾಚಾರ ಕಾಡಿದೆ.

ನಗರದ ಯಾವುದೇ ಹೋಟೆಲ್ ,ಅಂಗಡಿ, ಟೀಸ್ಟಾಲ್, ಕಚೇರಿ ,ಗ್ರಾಮಗಳಿಗೆ ಹೋದರು ಚುನಾವಣೆ ಫಲಿತಾಂಶದ ಬಗೆಗಿನ ಮಾತುಗಳು ಹರಿದಾಡುತ್ತಿದೆ.

ಬೇಲೂರು ಹಾಗೂ ಸಕಲೇ ಶಪುರ ಆಲೂರು, ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂತೆಯೇ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆ ಸ್ ಮತ್ತು ಜೆಡಿಎಸ್ ಅಭ್ಯರ್ಥಿಯ ನಡುವೆ ನೇರ ಸ್ಪರ್ಧೆ ನಡೆದಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಜೆಡಿಎಸ್ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆದಿದೆ ಅರಕಲಗೂಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಎ ಮಂಜು ಅವರಿಗೆ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡ ಅವರು ತೀವ್ರ ಪೈಪೋಟಿ ಒಡ್ಡಿದ್ದಾರೆ ಎಂಬ ಲೆಕ್ಕಾಚಾರ ವ್ಯಾಪಕವಾಗಿದೆ.

ಬೆಟ್ಟಿಂಗ್‌ಗೂ ಹಿಂದೇಟು: ಯಾವುದೇ ಚುನಾವಣೆ ನಡೆದರು ಇಂತಹ ಅಭ್ಯರ್ಥಿ ಗೆಲುವು ಪಡೆಯಲಿದ್ದಾರೆ ಇಂತಹವರು ಸೋಲು ಪಡೆಯುವರು ಎಂಬ ಲೆಕ್ಕಾಚಾರ ನಡೆಯುತ್ತಿತ್ತು ಹಾಗೂ ಕೋಟ್ಯಾಂತರ ರೂ ಬೆಟ್ಟಿಂಗ್ ನಡೆಯುತ್ತಿತ್ತು ಆದರೆ ಈ ಬಾರಿ ಲೆಕ್ಕಾಚಾರಕ್ಕೆ ಸಿಗದಂತೆ ಪ್ರತಿ ಕ್ಷೇತ್ರದ ಚುನಾವಣೆ ಫಲಿತಾಂಶ ನಿಗೋಢವಾಗಿದೆ. ಯಾವ ಅಭ್ಯರ್ಥಿ ಗೆಲುವು ಪಡೆಯಲಿದ್ದಾರೆ ಎಂಬ ಅಂದಾಜನ್ನು ಮಾಡಲು ಸಾಧ್ಯವಾಗುತ್ತಿಲ್ಲ.

ಎಲ್ಲ ಚುನಾವಣೆಗೂ ಭಿನ್ನ: ಈ ಬಾರಿಯ ವಿಧಾನಸಭೆ ಚುನಾವಣೆ ಈ ಹಿಂದೆ ನಡೆದ ಹಲವು ವಿಧಾನಸಭೆ ಚುನಾವಣೆಗೆ ಭಿನ್ನವಾಗಿದೆ ಎಂದು ಹೇಳಬಹುದು. ಕಾರಣ ಹಣ ಬಲ ಜಾತಿಬಲ ಸೇರಿದಂತೆ ಯಾವುದೇ ಲೆಕ್ಕಾಚಾರ ಕ್ಕೂ ವಿರುದ್ದವಾಗಿ ಜನಾದೇಶ ಮಾಡಿರುವ ಮತದಾರ ಮತಪೆಟ್ಟಿಗೆ ತೆಗೆದು ಎಣಿಕೆ ಮಾಡುವ ವರಗೆ ನಿರ್ಧಿಷ್ಟ ವಾಗಿ ಫಲಿತಾಂಶ ಹೇಳಲು ಸಾಧ್ಯವಾಗುತ್ತಿಲ್ಲ.

ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಹಣದ ಹೊಳೆಯೇ ಈ ಚುನಾವಣೆಯಲ್ಲಿ ಹರಿಯಲಿದೆ ಎಂಬ ಮಾತು ಹುಸಿಯಾಗಿದೆ ಎನ್ನಲಾಗುತ್ತಿದೆ . ಕೆಲ ಪಕ್ಷದಿಂದ ಮತದಾರರಿಗೆ ಸಾವಿರಾರು ರೂ ಹಣದ ಅಮೀಷ ಒಡ್ಡುವ ಕುರಿತು ಮಾತುಗಳು ಕೇಳಿಬಂದರು ಸಾವಿರದ ಒಳಗೆ ಎಲ್ಲಾ ಪಕ್ಷದವರು ಸಮಾನವಾಗಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಕಾಣದ ಕಾಂಗ್ರೆಸ್: ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾಣದಂತಾಗಿದ್ದು ಅಂತಿಮ ಹಂತದಲ್ಲಿ ಟಿಕೆಟ್ ಪಡೆದ ಬನವಾಸೆ ರಂಗಸ್ವಾಮಿ ತಮ್ಮ ಕೈಲಾದ ಪ್ರಚಾರವನ್ನು ಕೈಗೊಂಡರು ಸಹ ಪಕ್ಷದ ಇತರೆ ಮುಖಂಡರ ಪೂರ್ಣ ಬೆಂಬಲ ಇಲ್ಲದೆ ಕ್ಷೇತ್ರದಲ್ಲಿ ಓಡಾಡಲು ಸಮಯ ಸಿಗದೇ ಕೊನೆಯ ಹಂತದ ಚುನಾವಣಾ ತಯಾರಿ ಸಮರ್ಪಕವಾಗಿ ಮಾಡದ ಹಿನ್ನೆಲೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿದೆ ಎನ್ನಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು