ಹಾಸನ: ಒಂದು ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲುವಂತೆ ಕಾನೂನು ಮಾಡಲಿ, ನಾನು ಈಗಲೇ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣಗೆ ರಾಜೀನಾಮೆ ಕೊಡಿಸ್ತೀನಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಹೊಳೆನರಸೀಪುರದ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕುಟುಂಬದಿಂದ ಒಬ್ಬರೇ ನಿಲ್ಲುವಂತೆ ಕಾನೂನು ಮಾಡಲಿ ಸವಾಲ್ ಹಾಕಿದ್ದಾರೆ.
ಪ್ರಜ್ವಲ್ ಹೇಳಿದ್ರೂ ಅಷ್ಟೇ, ರೇವಣ್ಣ ಹೇಳಿದ್ರೂ ಅಷ್ಟೇ ನಮ್ಮ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮವಾಗಿ ತೀರ್ಮಾನ ಮಾಡೋದು ದೇವೇಗೌಡರು , ಕುಮಾರಸ್ವಾಮಿ , ಇಬ್ರಾಹಿಂ. ನಾನು ರಾಷ್ಟ್ರೀಯ ಪಕ್ಷಗಳಿಗೆ ಹೇಳ್ತೀನಿ, ನಿಮ್ಮ ಕುಟುಂಬದಲ್ಲೂ ಯಾರನ್ನು ನಿಲ್ಲಿಸೋದು ಬೇಡ. ಬೇಕಿದ್ದರೆ ಒಂದು ಕುಟುಂಬದಿಂದ ಒಬ್ಬರೇ ನಿಲ್ಲುವಂತೆ ಕಾನೂನು ಮಾಡಲಿ, ನಾನು ಈಗಲೇ ಸೂರಜ್, ಪ್ರಜ್ಬಲ್ ರೇವಣ್ಣ ರಾಜೀನಾಮೆ ಕೊಡಿಸುತ್ತೇನೆ ಎಂದಿದ್ದಾರೆ.