Categories: ಹಾಸನ

ಹಾಸನ: ೩ನೇ ದಿನಕ್ಕೆ ಅರಣ್ಯ ವಲಯದ ದಿನಗೂಲಿ-ಹೊರಗುತ್ತಿಗೆ ನೌಕರರ ಧರಣಿ

ಹಾಸನ: ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ/ ಪಿ.ಸಿ.ಪಿ., ಪ್ರಸ್ತುತ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆ ಹಾಗೂ ಶೋಷಣೆ ವಿರುದ್ಧ ನಗರದ ಬಿ.ಎಂ. ರಸ್ತೆ ಬಳಿ ಇರುವ ಅರಣ್ಯ ಭವನದ ಮುಂದೆ ನ್ಯಾಯಕ್ಕಾಗಿ ಒತ್ತಾಯಿಸಿ ರಾಜ್ಯ ಅರಣ್ಯ ಇಲಾಖೆ ಸರಕಾರಿ ದಿನಗೂಲಿ ಪಿಸಿಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ನೌಕರರ ಸಂಘದ ಸದಸ್ಯರು ೩ನೇ ದಿನವು ಕೂಡ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದ್ದರೂ ಇಷ್ಟು ದಿವಸ ಸ್ಪಂದಿಸಿರುವುದಿಲ್ಲ. ಹಾಸನ ವೃತ್ತದ ತುಮಕೂರು ಮತ್ತು ಹಾಸನ ಪ್ರಾದೇಶಿಕ/ ಸಾಮಾಜಿಕ ವಿಭಾಗಗಳ ವ್ಯಾಪ್ತಿ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ೧೫-೨೦ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿನೌಕರರಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ನಮಗೆ ಇಲಾಖೆಯಿಂದ ಸಿಗುವ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಕೆಲವು ತಿಂಗಳು ಸಂಬಂಳ ನೀಡಿದರೆ ಮತ್ತೆ ಕೆಲವು ತಿಂಗಳು ಸಂಬಳವನ್ನೇ ಕೊಡುವುದಿಲ್ಲ. ಈಗಾಗಲೇ ಐದು ತಿಂಗಳಿಂದ ಸಂಬಳವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದೇವೆ. ಕೊಡುವ ಸಂಬಳದಲ್ಲೂ ಕಡಿಮೆ ಕೊಡುತ್ತಿದ್ದಾರೆ.

ಅಧಿಕಾರಿಗಳಿಂದ ನಮ್ಮ ಮೇಲೆ ಶೋಷಣೆ ನಡೆಯುತ್ತಿದೆ ಎಂದು ದೂರಿದರು. ಬೇಡಿಕೆ ಈಡೇರಿಕೆಗೆ ಈ ಹಿಂದೆಯೂ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದವು. ಆದರೆ ಕೆಲವೊಂದು ಲೋಪ ದೋಷಗಳಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ನಡುತೋಪು ಕಾಯಲು ನಾವು ಬೇಕು. ಬೆಂಕಿ ನಂದಿಸಲು ನಮ್ಮನ್ನು ಬಳಸಿಕೊಳ್ಳುತ್ತಾರೆ. ಚಿರತೆಗೆ ಬೋನು ಅಳವಡಿಸಲು, ವನ್ಯಜೀವಿ ಸಂರಕ್ಷಣೆ ಮಾಡಲು, ರಾತ್ರಿ-ಹಗಲು ಕಾವಲು ಕಾಯಲು, ಕಾಡಾನೆ ಓಡಿಸಲು ಹೀಗೆ ಪ್ರತಿಯೊಂದು ಅರಣ್ಯ ಇಲಾಖೆ ಕೆಲಸ ಕಾರ್ಯಗಳಿಗೆ ನಮ್ಮನ್ನು ಬಳಸಿಕೊಳ್ಳುತ್ತಾರೆ ಆದರೆ ಇದವರೆಗೂ ನಮ್ಮನ್ನುಇಲಾಖೆಯ ನೌಕರರೆಂದು ಪರಿಗಣಿಸಿರುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಕುಟುಂಬಕ್ಕೆ ೧-೪-೧೯೮೯ರಿಂದ ಮಾಸಿಕ ವೇತನ ನೀಡಬೇಕು. ಇವರು ಕೆಲಸ ಮಾಡಿರುವ ಬಗ್ಗೆ ಇಲಾಖೆಗೆ ದಾಖಲೆ ನೀಡಿ ಕೋರ್ಟ್ ಹೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹತ್ತು ವರ್ಷ ಪೂರೈಸಿರುವ ನೌಕರರನ್ನು ಖಾಯಂಗೊಳಿಸಿ ಅವರಿಗೆ ಪಿಂಚಣಿ, ಗ್ರಾಚುಟಿ, ಅನುಕಂಪದ ಕೆಲಸ ಇತ್ಯಾದಿ ಸೌಲಭ್ಯ ನೀಡಬೇಕು. ತಿಪಟೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೀರಲಿಂಗಯ್ಯ ಎಲ್.ಹೆಚ್., ಶಂಕರ ಅವರನ್ನು ಕೆಲಸದಲ್ಲಿ ಮುಂದುವರೆಸಿ ಅವರಿಗೆ ಬಾಕಿ ಇರುವ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಬುಕ್ಕಾ ಪಟ್ಟಣ/ಶಿರಾ ಪ್ರಾದೇಶಿಕ ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಹೆಚ್. ರಂಗನಾಥ್, ಹೇಮ್ಮನಾಯ್ಕ, ನಾಗರಾಜಯ, ಈರಣ್ಯ, ಧನಂಜಯ, ಎಸ್.ಆರ್ ಮೂರ್ತಿ, ಇವರನ್ನು ಕೆಲಸದಲ್ಲಿ ಮುಂದುವರೆ ಇಲಾಖಾ ದರಪಟ್ಟಿಯಂತೆ ವೇತನ ನೀಡಬೇಕು.ಈಗಾಗಲೇ ಅರ್ಧಂಬರ್ಧ ನೀಡಿರುವ ವೇತನದ ಬಗ್ಗೆ ಪರಿಶೀಲಿಸಿ ಪೂರ್ಣಪ್ರಮಾಣದಲ್ಲಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಸಕಲೇಶಪುರ ವಲಯದಲ್ಲಿ ಕಾಡಾನೆ ನಿಯಂತ್ರಣ ಕ್ಯಾಂಪ್‌ಗಳಿಗೆ ನೇಮಕಗೊಂಡ ಅರಣ್ಯ ವೀಕ್ಷಕರುಗಳನ್ನು ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯಕ್ಕೆ ಬಳಸಿಕೊಳ್ಳದೆ ಅರಣ್ಯ ವೀಕ್ಷಕರುಗಳನ್ನು ಅಧಿಕಾರಿಗಳ ಮನೆ ಕೆಲಸ ಹಾಗೂ ವಾಹನ ಚಾಲನೆ ಬಳಸಿಕೊಳ್ಳುತ್ತಿದ್ದು ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು ಸರ್ಕಾರ ಕೂಡಲೇ ಮುತುವರ್ಜಿ ವಹಿಸಿ ನಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಕಳೆದ ಮೂರು ದಿನಗಳಿಂದಲೂ ಧರಣಿ ಮಾಡಲಾಗುತ್ತಿದ್ದರೂ ಇದುವರೆಗೂ ಯಾವ ಅಧಿಕಾರಿಗಳು ಕೂಡ ಬಂದು ನಮ್ಮ ಬೇಡಿಕೆ ಬಗ್ಗೆ ಸ್ಫಂದಿಸಿರುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಧರಣಿಯಲ್ಲಿ ರಾಜ್ಯ ಅರಣ್ಯ ಇಲಾಖೆ ಸರಕಾರಿ ದಿನಗೂಲಿ ಪಿಸಿಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ನೌಕರರ ಸಂಘದ ರಾಜ್ಯಾಧ್ಯಕ್ಷೆ ಹೆಚ್.ಜಿ. ಹೇಮಲತ, ಎಲ್.ಹೆಚ್. ಬೀರಲಿಂಗಯ್ಯ, ಶಿವಣ್ಣ, ಶಂಕರ್, ಶಿವಕುಮಾರ್, ಬೀರಪ್ಪ, ಸಣ್ಣಸ್ವಾಮಿ, ರಂಗನಾಥ್, ಬೀರಲಿಂಗಯ್ಯ ಇತರರು ಉಪಸ್ಥಿತರಿದ್ದರು.

Gayathri SG

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

9 mins ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

33 mins ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

48 mins ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

2 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

3 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

3 hours ago