News Karnataka Kannada
Sunday, April 28 2024
ಹಾಸನ

ಹಾಸನ : ಸಿಮೆಂಟ್ ನೆಪದಲ್ಲಿ ೬ ಲಕ್ಷ ರೂ, ಕಿತ್ತ ವಂಚಕ

Hassan: Rs 6 lakh stolen on the pretext of cement
Photo Credit : News Kannada

ಹಾಸನ : ಸಿಮೆಂಟ್ ಕೊಡಿಸುವುದಾಗಿ ನಂಬಿಸಿ ಖಾತೆಗೆ ಹಣ ವರ್ಗಾಯಿಸಿಕೊಂಡು ಅಪರಿಚಿತನಿಂದ ವಂಚನೆಯಾಗಿರುವ ಘಟನೆ ನಡೆದಿದೆ.

ಕೇರಳಾಪುರದ ಮಂಜುನಾಥ್ ಸಿಮೆಂಟ್ ವ್ಯಾಪಾರ ಮಾಡಲು ಆನ್‌ಲೈನ್‌ನಲ್ಲಿ ಸರ್ಚ್ ಮಾಡುತ್ತಿದ್ದಾಗ ಅಂಬುಜ ಸಿಮೆಂಟ್ ಲಿಮಿಟೆಡ್ ಹೆಸರಿನಲ್ಲಿ ಸಿಕ್ಕಿದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ.

ಅಪರಿಚಿತ ವ್ಯಕ್ತಿ ಸಿಮೆಂಟ್ ನೀಡುವ ಭರವಸೆಯೊಂದಿಗೆ ಕಂಪನಿಯ ನಿಯಮದಂತೆ ೨೫ ಸಾವಿರ ರೂ, ರಿಜಿಸ್ಟ್ರೆ ಷನ್ ಫೀಸ್ ಮತ್ತು ೧ಲಕ್ಷ ಡಿಪಾಸಿಟ್ ಇಡಬೇಕೆಂದು ಹಾಗು ಕನಿಷ್ಟ ೧೫೦೦ ಚೀಲ ಸಿಮೆಂಟ್ ಖರೀದಿಸಬೇಕೆಂದು ತಿಳಿಸಿದ್ದಾರೆ. ವ್ಯವಹಾರದ ಮಾಹಿತಿಗಳನ್ನು ವಾಟ್ಸಪ್ ಮೂಲಕ ಅಪರಿಚಿತನ ವ್ಯಕ್ತಿಗೆ ನೀಡಿದರು.

ಕೆನರಾ ಬ್ಯಾಂಕ್‌ನ ಖಾತೆ ಸಂಖ್ಯೆಯಿಂದ ಅಂಬುಜ ಸಿಮೆಂಟ್ ಲಿಮಿಟೆಡ್‌ನ ಖಾತೆಸಂಖ್ಯೆಗೆ ನೆಫ್ಟ್ ಮೂಲಕ ೧,೨೫ ಲಕ್ಷ ರೂ,ಗಳನ್ನು ವರ್ಗಾವಣೆ ಮಾಡಿದ್ದಾರೆ. ಕೆನರಾ ಬ್ಯಾಂಕ್ ಖಾತೆಯಿಂದ ಅಂಬುಜ ಸಿಮೆಂಟ್ ಲಿಮಿಟೆಡ್‌ನ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಒಂದು ಬಾರಿ ೨,೪೧,೮೪೦ ರೂ, ಹಾಗೂ ಇನ್ನೊಂದು ಬಾರಿ
೨,೮೬,೮೪೦ ರೂ. ಗಳನ್ನು ವರ್ಗಾವಣೆ ಮಾಡಿದ್ದು, ಒಟ್ಟು ೬,೫೩,೬೮೦ ರೂ,ಗಳನ್ನು ಅಪರಿಚಿತ ವ್ಯಕ್ತಿಯು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡಿದ್ದು, ಸಿಮೆಂಟ್ ಕೊಡದೇ ಹಾಗೂ ಹಣವನ್ನು ವಾಪಸ್ ಕೊಡದೇ ವಂಚಿಸಲಾಗಿದೆ.
ಹಾಸನದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು