News Karnataka Kannada
Sunday, April 28 2024
ಹಾಸನ

ಹಾಸನ: 14 ಸಾವಿರಕ್ಕೂ ಹೆಚ್ಚು ಮತ ನೀಡಿ ಜನ ಆಶೀರ್ವದಿಸಿದ್ದಾರೆ – ಪ್ರೀತಂ ಗೌಡ

People have blessed me with more than 14,000 votes: Preetham Gowda
Photo Credit : News Kannada

ಹಾಸನ: ಕಳೆದ ಚುನಾವಣೆಯಲ್ಲಿ ೬೩ ಸಾವಿರ ಮತ ಕೊಟ್ಟು ಆಶೀರ್ವಾದ ಮಾಡಿದ್ದು, ಈ ಭಾರಿ ಕಳೆದ ಬಾರಿಗಿಂತ ಹದಿನಾಲ್ಕು ಸಾವಿರ ಹೆಚ್ಚು ಮತಕೊಟ್ಟು ಮಾಡಿರುವ ಕೆಲಸಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನನ್ನ ಅಭಿ ವೃದ್ಧಿ ಕೆಲಸ, ಮಾಡ್ತಿರುವ ಸೇವೆ ಗುರುತಿಸಿ ಜನ ಬಹಳ ಹುಮ್ಮ ಸ್ಸಿನಿಂದ ಆಶೀರ್ವಾದ ಮಾಡಿ ದ್ದಾರೆ, ಚುನಾವಣೆ ಫಲಿತಾಂಶ ವಿರುದ್ಧವಾಗಿ ಬಂದಿರಬಹುದು ಆದರೆ ಜನರ ಆಶೀರ್ವಾದ ಪ್ರೀತಂಗೌಡ ಪರ ಇದೆ ಎನ್ನುವುದಕ್ಕೆ ಶೇ.೨೫ ಹೆಚ್ಚು ಮತ ನೀಡಿದ್ದಾರೆ.

ಈ ಬಾರಿಯ ಚುನಾವಣೆ ಯಲ್ಲಿ ನನಗೆ ೭೭,೩೦೦ ಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ, ಬಿಜೆಪಿ ಕಾರ್ಯಕರ್ತರು ದೇವರುಗಳಿಗೆ ಅಭಾರಿಯಾಗಿದ್ದೇನೆ, ನನ್ನ ರಾಜಕೀಯ ಜೀವನದ ಕಷ್ಟಕರ ಸಮಯದಲ್ಲಿ ನನಗೆ ಬೆಂಬಲ ಕೊಟ್ಟಿದ್ದಾರೆ ಎಂದರು.

ಸಂಘ ಪರಿವಾರದ ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ಭಾವನೆಗೆ ಪೂರ ಕವಾಗುವ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ, ಕಳೆದ ಬಾರಿ ೧೩ ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೆ, ಈ ಭಾರಿ ಅದರ ಅರ್ಧದಷ್ಟು ಮತಗಳಿಂದ ವಂಚಿತನಾಗಿದ್ದೇನೆ. ಯಾವುದೇ ಕಾರಣದಿಂ ದಲೂ ನನಗೆ ಸೋಲಾಗಿದೆ ಎಂದು ಭಾವಿಸುವುದಿಲ್ಲ, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶೇ.೧೫ ರಷ್ಟು ಮತ ಪಡೆದಿದ್ದಾರೆ, ೨೨೪ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅತಿ ಕಡಿಮೆ ಶೇಕಡಾವಾರು ಮತ ಪಡೆದಿ ರುವುದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ೪ ಸಾವಿರ ಮತ ಪಡೆದ ಪರಿಣಾಮ ಈ ಬಾರಿ ತನಗೆ ಸೋಲಾಗಿದೆ ಎಂದರು.

ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಒಂದು ವರ್ಗ, ಆ ಪಕ್ಷದ ಅಭ್ಯರ್ಥಿ ೩೫ ರಿಂದ ೪೦ ಸಾವಿರ ಓಟು ತೆಗೆದುಕೊಳ್ಳುತ್ತಿದ್ದರು, ಆದರೆ ಈ ಭಾರಿ ಚುನಾವಣೆ ಯಲ್ಲಿ ಕೇವಲ ನಾಲ್ಕು ಸಾವಿರ ಮತ ಪಡೆದಿದ್ದಾರೆ. ಪ್ರೀತಂಗೌಡ ಯಾರನ್ನು ಭಯಪಡಿಸುವ ಕೆಲಸಕ್ಕೆ ಕೈ ಹಾಕಿಲ್ಲ, ಮುಸ್ಲಿಂ ಭಾಂದವರನ್ನು ಅತಿ ಹೆಚ್ಚು ಪ್ರೀತಿಸುವ, ಗೌರವ ಕೊಡುವ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಇದ್ದರೆ ಅದು ಪ್ರೀತಂಗೌಡ, ಅವರ ಮೇಲೆ ಆಕ್ರೋಶ ಹೊರ ಹಾಕುವ ಅವಶ್ಯಕತೆ ನನಗಿಲ್ಲ ಎಂದರು.

ರಾಜ್ಯದಲ್ಲಿ ೧೩೫ ಸ್ಥಾನ ಪಡೆದ ಕಾಂಗ್ರೆಸ್ ಪಕ್ಷಕ್ಕೆ ಹಾಸನದಲ್ಲಿ ಅತೀ ಕಡಿಮೆ ಮತಗಳನ್ನು ಪಡೆದಿರುವ ಕ್ಷೇತ್ರ ಹಾಸನದಲ್ಲೀ, ಕಳೆದ ಭಾರಿ ಕಾಂಗ್ರೆಸ್‌ಗೆ ಓಟು ಹಾಕಿದಂತಹ ಒಂದು ವರ್ಗ ಜನತಾದಳಕ್ಕೆ ಮತ ಹಾಕಿದ್ದಾರೆ ಅದರಲ್ಲಿ ವ್ಯತ್ಯಾಸ ಇದ್ದರೆ ಹೇಳಿ ತಿದ್ದಿಕೊಳ್ಳುವ ಕೆಲಸ ಮಾಡ್ತಿನಿ ಎಂದರು.

ನಾನು ಒಂದು ವರ್ಗ ಅಂತ ಹೇಳಿದ್ದೇನೆ, ಒಂದು ಸಮುದಾ ಯ ಅಂತ ಹೇಳಿಲ್ಲ, ಒಂದು ವರ್ಗದ ಜನ ಕಳೆದ ಭಾರಿ ಕಾಂಗ್ರೆ ಸ್ ಮತ ಹಾಕ್ತಿದ್ದರು, ಈಗ ಜೆಡಿ ಎಸ್ ಹಾಕಿದ್ದಾರೆ,ಆ ವರ್ಗದ ಮತಗಳು ನನಗೆ ಬೇಕಿಲ್ಲ, ಅದರಲ್ಲೇನು ಮಡಿವಂತಿಕೆ ಇಲ್ಲ ಎಂದು ಸ್ಪಷ್ಟ ಪಡಿಸಿದರು
ನೂತನ ಶಾಸಕರು ಇನ್ನಷ್ಟು ಕೆಲಸ ಮಾಡಲಿ. ಪ್ರೀತಂಗೌಡ ಯಾವ ರೀತಿ ಕೆಲಸ ಮಾಡಿದ್ದಾನೆ ಅದನ್ನು ನೂತನ ಶಾಸಕರು ಮುಂದುವರಿಸಿಕೊಂಡು ಹೋಗಲಿ ಎಂದ ಅವರು, ಯುವಕರು, ವಿದ್ಯಾವಂತರಿದ್ದಾರೆ ಇನ್ನೂ ಹೆಚ್ಚು ಕೆಲಸ ಮಾಡುವ ನಿರೀಕ್ಷೆ ಇದೆ, ನಾವು ಮಾಡಿರುವ ಕೆಲಸಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಇನ್ನಷ್ಟು ಕೆಲಸ ಮಾಡಲಿ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನೂತನ ಶಾಸಕರು ಮಾಡಲಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು