ಹಾಸನ: ವಿಧಾನಸಭಾ ಚುನಾ ವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ರಂಗಸ್ವಾಮಿ ( ಬನವಾಸೆ) ಇವರ ಪರ ಮತ ಯಾಚನೆ ಮಾಡಲು ಮಹಿಳಾ ಕಾಂಗ್ರೆಸ್ ನಿಂದ ನಗರದ ಬಿ.ಎಂ. ರಸ್ತೆ ಬಳಿ ಇರುವ ಶ್ರೀ ಉಡು ಸಲಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಚಾಲನೆ ನೀಡಲಾಯಿತು.
ನಂತರ ಮಾತನಾಡಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರ ಚಂದನ್ ಅವರು, ಮೇ. ೧೦ ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ಹನ್ನಲೆ ಯಲ್ಲಿ ಪ್ರಚಾರಕ್ಕೆ ಮಹಿಳೆಯರು ಎಲ್ಲಾ ವಾಡ್ಗಳಿಗೆ ತೆರಳಲು ಉಡುಸಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬನವಾಸೆ ರಂಗಸ್ವಾಮಿ ಅವರಿಗೆ ಶುಭವಾಗಲಿ ಎಂದು ಗ್ರಾಮ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ತೆರಳುತ್ತಿದ್ದೇವೆ ಎಂದರು. ನಮ್ಮ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಪಕ್ಷದ ಆಯೋಜಕರಾದ ಪೂಜ ರವರು ಚುನಾವಣೆ ಮುಗಿಯು ವವರೆಗೂ ನಮ್ಮ ಜೊತೆ ಇದ್ದು ನಮ್ಮ ಪಕ್ಷದ ಅಭ್ಯರ್ಥಿಯ ಗೆಲು ವಿಗೆ ಶ್ರಮಿಸಲಿದ್ದಾರೆ. ಮೊದಲ ದಿವಸ ನಾಲ್ಕು ವಾರ್ಡ್ಗಳಲ್ಲಿ ಸಂಚರಿಸಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಮಹಿಳಾ ಶಕ್ತಿ ದೊಡ್ಡದು ಸಮಾಜದಲ್ಲಿ ತನ್ನದೆಯಾದ ಶಕ್ತಿ ಹೊಂದಿದೆ. ಮಹಿಳೆಯರಿಂದ ದೇವರಿಗೆ ಪೂಜೆ ಸಲ್ಲಿಸಿ ನಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಾರ್ಥನೆ ಮಾಡಲಾಗಿದೆ. ಒಂದು ಮಹಿಳೆ ಕೂಗು ದೆಹಲಿವರೆಗೂ ಕೇಳಿಸ ಬೇಕು. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಪ್ರಣಾಳಿ ಕೆಗಳು ಜನರ ಮೆಚ್ಚಿಗೆಗೆ ಪಾತ್ರವಾಗಿದೆ ಎಂದರು.
ಹಾಸನ ಕ್ಷೇತ್ರದ ಅಭ್ಯರ್ಥಿ ಬಿ.ಕೆ. ರಂಗಸ್ವಾಮಿ (ಬನವಾಸೆ) ಮಾಧ್ಯಮದೊಂದಿಗೆ ಮಾತನಾಡಿ, ರಾಷ್ಟ್ರೀಯ ವೀಕ್ಷಕರಾದಂತಹ ಪೂಜಾಜಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ತಾರ ಚಂದನ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ದೇವರಾಜೇಗೌಡರ ನೇತೃತ್ವದಲ್ಲಿ ಪ್ರಚಾರವನ್ನು ಆರಂಭ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯ ಕರ್ತರು ಹಾಸನ ನಗರದ ೩೫ ವಾರ್ಡ್ಗಳ ಮನೆ ಮನೆಗೆ ತೆರಳಿ ಪಕ್ಷದ ಉದ್ದೇಶಗಳನ್ನು ತಿಳಿಸಿ ನಮ್ಮ ಅಭ್ಯರ್ಥಿ ಬಿ.ಕೆ. ರಂಗಸ್ವಾಮಿ ಪರ ಮತ ಯಾಚನೆ ಮಾಡಲಾಗು ವುದು. ಭ್ರಷ್ಟಾಚಾರ ದಲ್ಲಿ ಬಿಜೆಪಿ ಸರಕಾರವು ತೊಡಗಿದೆ ಎಂದು ಆರೋಪಿಸಿದರು.