ಹಾಸನ

ಹಾಸನ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ – ಇಬ್ರಾಹಿಂ ಭವಿಷ್ಯ

ಹಾಸನ: ರಾಜ್ಯದಲ್ಲಿ ಜನರು ಹಾಗೂ ದೇವೇಗೌಡರ ಆಶೀರ್ವಾದದಿಂದ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕಾಲ ಸನಿಹವಾಗಿದ್ದು ಮೇ ೧೮ರಂದು ಜನತಾದಳ ಸರ್ಕಾರ ಅಧಿಕಾರಿಕೆ ಬರಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು.

ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಿಸಿ ಹ್ಯಾಂಡ್ ಪೋಸ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಕುಮಾರಸ್ವಾಮಿ ಅವರು ಪಕ್ಷದ ಪರ ಪ್ರಚಾರ ಮಾಡಿದ್ದು ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ನಾನು, ದೇವೇಗೌಡರು, ರೇವಣ್ಣ, ಭವಾನಿ ರೇವಣ್ಣ ಪ್ರವಾಸ ಮಾಡಲಿದ್ದೇವೆ ಎಂದರು.

ಗಂಡಸಿ ಸಂತೆ ಖಾಲಿಯಾಗಿದೆ, ಜೆಡಿಎಸ್ ನ ಸಂತೆ ಭರ್ತಿಯಾಗಿದ್ದು ಎಲ್ಲರೂ ಈ ಬಾರಿ ತೀರ್ಮಾನ ಮಾಡಿಕೊಂಡು ಬಂದಿದ್ದೀರಾ ಎಂದು ಸಾರ್ವಜ ನಿಕರನ್ನು ಉದ್ದೇಶಿಸಿ ಹೇಳಿದ ಅವರು ಮೋದಿ ರಾಹುಲ್ ಗಾಂಧಿ ಯಾರೇ ಬಂದರೂ ಹಾಸನ ಜಿಲ್ಲೆ ಗಂಡು ಮೆಟ್ಟಿದ ಗೌಡರ ಜಿಲ್ಲೆಯಾಗಿದೆ.

ಶಿವಲಿಂಗೇಗೌಡರಿಗೆ ಇಷ್ಟು ದಿನ ದೇವೇಗೌಡರು ಬೇಕಾಗಿತ್ತು ಈಗ ಸೋನಿಯಾ ಗಾಂಧಿ ಮೇಲೆ ಆಸೆ ಆಗಿದೆ, ಈ ಊರಿನಲ್ಲಿ ಮೈದು ಆಯ್ತು ಮುಂದಿನ ಊರಿಗೆ ಮೇಯಲು ಹೋಗುತ್ತಿದ್ದಾರೆ ಎಂದು ಟೀಕಿ ಸಿದರು. ಗೌಡರ ಮಕ್ಕಳು ಜಾತಿವಾದಿಗಳಲ್ಲ ಬೀಜ ಬಿತ್ತುವ ಜನ ಎಂದು ಹೇಳಿದ ಅವರು ದೇವೇ ಗೌಡರು ಹಾಗೂ ಅವರ ಮಕ್ಕಳು ಲಿಂಗಾಯಿತರ ವಿರೋಧಿಗಳಲ್ಲ ಹಾಸನ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ ಇಬ್ಬರು ಲಿಂಗಾಯಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ ಎಂದು ನುಡಿದರು.

ದೇವೇಗೌಡರು ಕುಮಾರಸ್ವಾಮಿ ಮುಖ ನೋಡಿದರೆ ವೋಟು ಹಾಕುವುದಿಲ್ಲ ಎಂದು ಹೇಳಿದ ಶಿವಲಿಂಗೇಗೌಡರು ೧೫ ವರ್ಷ ಯಾರ ಮುಖದಿಂದ ಗೆದ್ದರೂ ಹಾಗೂ ಶಾಸಕರಾದರು ಎಂದು ಪ್ರಶ್ನಿಸಿದ ಅವರು ಇಂದು ಸೋನಿಯಾ ಗಾಂಧಿ ಮುಖ ಚೆನ್ನಾಗಿದೆ ಎಂದು ಕಾಂಗ್ರೆಸ್ ಗೆ ಹೋಗಿದ್ದೀಯಾ ಎಂದು ಲೇವಡಿ ಮಾಡಿದರು.

Ashika S

Recent Posts

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

18 mins ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

1 hour ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

2 hours ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

3 hours ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

3 hours ago