ಹಾಸನ: ಹಾಸನಾಂಬೆ ಉತ್ಸವದ 8ನೇ ದಿನವಾಗಿರುವ ಇಂದು ಬ್ಯಾರಿಕೇಡ್ ಗಳಲ್ಲಿ ವಿದ್ಯುತ್ ಪ್ರವಹಿಸಿದ ಘಟನೆ ನಡೆದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದಾಗ ಜಿಲ್ಲಾ ಉಸ್ತವಾರಿ ಸಚಿವ ಕೆಎನ್ ರಾಜಣ್ಣ ತುಮಕೂರಲ್ಲಿದ್ದರು. ಹಾಸನಕ್ಕೆ ತೆರಳುವ ಮೊದಲು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ದೊಡ್ಡ ಆನಾಹುತಕಾರಿ ವಿದ್ಯಮಾನಗಳೇನೂ ಜರುಗಿಲ್ಲ.
ತಮಗೆ ದೊರೆತಿರುವ ಮಾಹಿತಿಯ ಪ್ರಕಾರ ಜನ ಗಾಬರಿ ಮತ್ತು ಅತಂಕಕ್ಕೆ ಒಳಗಾಗಿದ್ದು ಸತ್ಯ, ಆದರೆ ಈಗ ಹಾಸನಾಂಬೆ ದೇವಸ್ಥಾನ ಆವರಣ ಸಾಮಾನ್ಯ ಸ್ಥಿತಿಗೆ ಮರಳಿದೆ, ದರ್ಶನದ ವ್ಯವಸ್ಥೆ ಮತ್ತೆ ಪ್ರಾರಂಭಗೊಂಡಿದೆ ಮತ್ತು ಭಕ್ತಾದಿಗಳು ದೇವಿಯ ದರ್ಶನ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದ ಮತ್ತು ಶಾಸಕರು ಮಾತಾಡಿಸಿದ್ದಾರೆ, ಯಾರೂ ಗಾಬರಿಯಾಬೇಕಿಲ್ಲ ಎಂದು ರಾಜಣ್ಣ ಹೇಳಿದರು.