ಹಾಸನ: ಸಂಸದ, ಹಾಸನ ಲೋಕಸಭಾ ಕ್ಷೇತ್ರದ ಎನ್.ಡಿ.ಎ.ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಹೊರಡಿಸಿರುವ ಸಾಧನೆಗಳ ಕರಪತ್ರದಲ್ಲಿ ರೈಲುಗಳ ನಿಲುಗಡೆಗೆ ಕ್ರಮಕೈಗೊಂಡಿರುವ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ, ರಾದಮ್ಮ ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಹೇಮಂತ್ ಕುಮಾರ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲೂರು, ಹಿರೀಸಾವೆ, ದುದ್ದ, ಮೊಸಳೆ ಹೊಸಳ್ಳಿಗಳಲ್ಲಿ ರೈಲು ನಿಲುಗಡೆಯನ್ನು ತಮ್ಮ ಸಾಧನೆ ಎಂದು ಕರಪತ್ರದಲ್ಲಿ ಮುದ್ರಿಸಿಕೊಂಡಿದ್ದಾರೆ.
ಆದರೆ, ಹಿರೀಸಾವೆ, ದುದ್ದ, ಮೊಸಳೆಹೊಸಳ್ಳಿಗಳಲ್ಲಿ ರೈಲು ನಿಲುಗಡೆ ನೀಡುವುದಿಲ್ಲ. ಬೆಂಗಳೂರು-ಕಾರವಾರ ಎಕ್ಸ್ ಪ್ರೆಸ್ ರೈಲು ಆಲೂರಿನಲ್ಲಿ ನಿಲುಗಡೆ ನೀಡುತ್ತಿದೆ. ಅದರ ಹಿಂದೆ ನನ್ನ ಹೋರಾಟವಿದೆ ಹೊರತು ಪ್ರಜ್ವಲ್ ಪಾತ್ರವಿಲ್ಲ ಎಂದರು.
ನಾನು ದೆಹಲಿಗೆ ಹೋಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ನೀಡಿ ನಡೆಸಿದ ಶ್ರಮದ ಫಲವಾಗಿ ಆಲೂರಿನಲ್ಲಿ ರೈಲು ನಿಲುಗಡೆಗೆ ಇಲಾಖೆ ಆದೇಶ ಹೊರಡಿಸಿತು.
ಈ ಸಂಬಂಧ ನನಗೆ ಹಿಂಬರಹ ಸಹ ನೀಡಿದೆ ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟ ನಡೆಸುತ್ತೇನೆ ಎಂದರು. ವಿಶ್ವನಾಥ್ ,ಗ್ರಾಮ ಪಂಚಾಯತಿ ಸದಸ್ಯ ಅರುಣ್ ಇದ್ದರು.