ಹಾಸನ: ಮುಂದಿನ ೫ ಅಥವಾ ೧೦ ವರ್ಷಗಳ ನಂತರವಾದರೂ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು ಜಿಲ್ಲೆಯನ್ನು ರಾಜ್ಯದಲ್ಲಿಯೇ ಮೊದಲನೇ ಸ್ಥಾನಕ್ಕೆ ಕೊಂಡೊಯ್ಯುವುದು ಶತಸಿದ್ಧ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿ ಗೆ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದಿಂದ ಜಿಲ್ಲೆಗೆ ಅಗತ್ಯ ಅಭಿವೃದ್ಧಿಗೆ ಸಹಕಾರ ನೀಡಿಲ್ಲ ನಾ ಬದುಕಿರುವಾಗ ಹಾಸ ನ ಜಿಲ್ಲೆಯ ಅಭಿವೃದ್ಧಿ ಮಾಡುವ ಮೂಲಕ ರಾಜ್ಯದಲ್ಲಿ ನಂಬರ್ ಒನ್ ಸ್ಥಾನಕ್ಕೆ ತರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ ರೇವಣ್ಣ ಅವರು ಮಾತಿಗೆ ತಪ್ಪಿದರೆ ರಾಜಕೀಯದಲ್ಲೇ ಸಕ್ರಿಯವಾಗಿ ಉಳಿಯೋದಿಲ್ಲ ಎಂದು ಸವಾಲು ಹಾಕಿದರು.
ಜೆಡಿಎಸ್ಗೆ ಪಕ್ಷಾತೀತ ಜನ ಬೆಂಬಲ
ಈ ಬಾರಿಯಾ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನರು ಪಕ್ಷಾತೀತವಾಗಿ ಜೆಡಿ ಎಸ್ ಗೆ ಬೆಂಬಲ ನೀಡಿದ್ದಾರೆ . ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಮುಗಿಸಲು ಹುನ್ನಾರ ಮಾಡಿದ್ದರು, ಜನ ನಮ್ಮನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಹಾಸನ ವಿಧಾನಸಭಾ ಕ್ಷೇತ್ರ ದಲ್ಲಿ ಸ್ವರೂಪವರನ್ನು ಪಕ್ಷಾತೀ ತವಾಗಿ ಸಹಕಾರ ನೀಡಿದ್ದು ಅವರ ತಂದೆ ಪ್ರಕಾಶ್ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾ ದದಿಂದ ಮತ್ತು ಕ್ಷೇತ್ರದ ಮತದಾ ರರ ಬೆಂಬಲದಿಂದ ಗೆಲುವು ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಉತ್ತಮ ಕೆಲಸ ಮಾಡಲಾಗುವುದು . ಈ ಹಿಂದಿನ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯೊಡ್ಡದೆ. ಬಡವರಿಗೆ ಕೂಲಿ ಕಾರ್ಮಿಕರಿಗೆ ನಾವು ನೀಡಿದಂತಹ ಭರವಸೆಯಂತೆ ನಿವೇಶವನ್ನು ಒದಗಿಸಲಾಗುವುದು ಎಂದರು.
ಈ ಚುನಾವಣೆಯಲ್ಲಿ ಆಗಿ ರುವ ತಪ್ಪನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಲೋಕಸಭೆ ಚುನಾವಣೆ ಎದುರಿಸಲಿದ್ದೇವೆ. ಪ್ರತಿ ತಾಲೂಕಿನಲ್ಲಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ನಡೆಸಿ ತಪ್ಪಿನ ಪರಾಮರ್ಶೆ ನಡೆಸಲಾಗುವುದು ಹಾಗೂ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುವುದು ಎಂದರು.
ಯಾರೇ ಸಿಎಂ ಅದರೂ ಸ್ವಾಗತವಿದೆ:
ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದ್ದು ಸರ್ಕಾರ ರಚಿಸಲಿದೆ ಆದರೆ ಚುನಾವಣಾ ಪೂರ್ವ ಜನರಿಗೆ ನೀಡಿದ ಗ್ಯಾರಂಟಿಯನ್ನು ಮೊದಲು ಜಾರಿ ಮಾಡಲಿ ಕಾಂಗ್ರೆಸ್ ನಿಂದ ಯಾರೇ ಮುಖ್ಯ ಮಂತ್ರಿಯಾದರು ಸ್ವಾಗತವಿದೆ ಎಂದು ರೇವಣ್ಣ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಹಾಜರಿದ್ದರು
ಪ್ರಜ್ವಲ್ ಹಾಗೂ ದೇವೇಗೌಡರು ಸ್ಪರ್ಧೆ
ಮುಂದಿನ ಲೋಕಸಭೆ ಚುನಾವಣೆಗೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರೇ ಸ್ಪರ್ಧಿಸಲಿದ್ದಾರೆ ಹಾಗೂ ಎಚ್.ಡಿ. ದೇವೇಗೌಡ ಅವರು ಸಹ ಲೋಕಸಭೆಗೆ ಸ್ಪರ್ಧೆ ಮಾಡಲಿದ್ದು ಯಾವ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ರೇವಣ್ಣ ಸ್ಪಷ್ಟಪಡಿಸಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಬಿಲ್ ಮಾಡದಂತೆ ಸ್ವರೂಪ್ ತಾಕೀತು
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಕಾಮಗಾರಿ ಸಂಬಂಧ ಕೆಲಸ ಆಗದಿದ್ದರೂ ಬಿಲ್ ಮಾಡುವಂತೆ ಗುತ್ತಿಗೆದಾರರು ಅಧಿಕಾರಿ ಗಳಿಗೆ ಒತ್ತಡ ಹಾಕುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ನನ್ನ ನೇತೃತ್ವದಲ್ಲಿ ಮುಂದಿನ ಸಭೆ ನಡೆಯುವವರೆಗೂ ಯಾವುದೇ ಬಿಲ್ಗಳನ್ನು ಮಾಡಬಾರದು ಹಾಗೂ ವಿಲೇ ಇಡುವಂತೆ ನೂತನ ಶಾಸಕ ಸ್ವರೂಪ್ ತಾಕೀತು ಮಾಡಿದರು.