ಬೇಲೂರು: ಬೇಲೂರು ತಾಲ್ಲೂಕು ಮಾದಿಹಳ್ಳಿ ಹೋಬಳಿ ಶಿವಯೋಗಿ ಪುರ ಗ್ರಾಮದ ನಿವಾಸಿ ನಾಗರಾಜು ಬಿನ್ ನಿಂಗಯ್ಯ ರವರಿಗೆ ಸೇರಿದ ಮೂರು ಹಸುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಭಾರಿ ಗುಡುಗು ಸಿಡಿಲಿನಿಂದ ವರುಣ ಆರ್ಭಟಿಸಿದ ಹಿನ್ನೆಲೆ ಮನೆಯ ಹತ್ತಿರದಲ್ಲಿ ಕಟ್ಟಿಹಾಕಿದ ಮೂರು ಹಸುಗಳಿಗೆ ಸಿಡಿಲು ಬಡಿದಿದೆ.
ಸ್ಥಳಕ್ಕೆ ತಾಲ್ಲೂಕು ದಂಢಾಧಿಕಾರಿ ಎಂ.ಎಸ್ ಮಮತ ಭೇಟಿನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಸ್ಥಳದಲ್ಲಿ ಹಗರೆ ತಾಲ್ಲೂಕು ಕಛೇರಿ ಉಪತಹಸಿಲ್ದಾರ್ ಗಂಗಾಧರ್. ರವಿನ್ಯೂ ಇನ್ಸ್ಪೆಕ್ಟರ್ ಸಂತೋಷ್. ಗ್ರಾಮಲೆಕ್ಕಿಗರು ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.