ಬೇಲೂರು: ಮುಂದಿನ ಸಾರ್ವತ್ರಿಕಾ ಚುನಾವಣೆಯಲ್ಲಿ ಕೆ ಆರ್.ಎಸ್ ಪಕ್ಷದಿಂದ ಸ್ಪರ್ದಿ ಸಲು ತಾಲ್ಲೂಕಿನಲ್ಲಿ ಸೂಕ್ತ ಅಭ್ಯರ್ಥಿಗೆ ಮುಕ್ತ ಅವಕಾಶವನ್ನು ನೀಡಲಾಗುವುದು ಎಂದೂ ಕೆ ಆರ್ ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹರ್ಷವರ್ಧನ್ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕರುನಾಡು ಕಟ್ಟುವ ಸಲುವಾಗಿ ಲಂಚಮುಕ್ತ ಆಡಳಿತ ಕೊಡುವುದೇ ಪಕ್ಷದ ದೈಯ, ಕನ್ನಡ ನಾಡಿಗೆ ಪ್ರಣಾಳಿಕೆ ಕುರಿತು ಸ್ವಾಭಿಮಾನಿ ಕನ್ನಡಿಗರ ಜೊತೆ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂದು ಸ್ವಾಮಿ ರವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಈ ವರಗೆ ೨೪ ಜಿಲ್ಲೆಯ ಎಲ್ಲಾ ತಾಲ್ಲೂಕ್ಕು ಗಳಲ್ಲೂ ಯಾತ್ರೆ ನಡೆಸಿ ಯಶಸ್ವಿ ಯಾಗಿದ್ದೇವೆ ಎಂದರು.
ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಈಗಾಗಲೇ ೭೨ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು. ಜನರ ಸಮಸ್ಯೆ, ಅವರಿಗೆ ಬೇಕಾದ ಯೋಜನೆ, ನೆಮ್ಮದಿ ಬದುಕು ಕಟ್ಟಲು ಬೇಕಾದ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ, ಬೇಲೂರು ತಾಲ್ಲೂಕಿನಲ್ಲಿ ಈಗಾ ಗಲೇ ಅಭ್ಯರ್ಥಿಯನ್ನು ಸೂಚಿಸಿ ದ್ದು, ಬೇರೆ ಯಾರೇ ಬಂದು ಸ್ಪರ್ದಿಸಲು ಇಚ್ಛೆಸಿದರೆ ಚರ್ಚಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ತಾಲೂಕಿನಲ್ಲಿ ಕೆ ಆರ್ ಎಸ್ ಪಕ್ಷದ ಬಾವುಟ ಹಾರಿಸಲು ಕಠಿಣ ಶ್ರಮ ಪಡಲಿದ್ದೇವೆ ಎಂದೂ ಹೇಳಿದರು,
ಸುನಿಲ್ ಬೆಳ್ಳೋಟ್ಟೆ ನಾಡಿ ಪಕ್ಷವು ರೈತ ಪ್ರಣಾಳಿಕೆ, ಯುವ ಜನ ಪ್ರಣಾಳಿಕೆ, ಮಹಿಳಾ ಪ್ರಣಾಳಿಕೆ, ಹಾಗೂ ಪರಿಸರ ಪ್ರಣಾಳಿಕೆಗಳನ್ನು ಸಿದ್ದಪಡಿಸಿದ್ದು, ನಮ್ಮ ಪಕ್ಷವು ಲಂಚ ಮುಕ್ತ ರಾಜ್ಯವನ್ನಾಗಿ ಮಾಡಲು ಒಗ್ಗಟ್ಟಿನಿಂದ ಹೋರಾಡಲಿದ್ದೇವೆ. ಕಚೇರಿಗಳಲ್ಲಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಹಾಗೂ ಅಧಿಕಾರಿಗಳು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಕಚೇರಿಗಳಿಗೆ ತಂಡ ಭೇಟಿ ನೀಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಿರೀಶ್, ಸಂಘಟನಾ ಕಾರ್ಯ ದರ್ಶಿ ಆದೇಶ್, ಸಿ ಎಲ್, ಇದ್ದರು.
ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…
ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…
ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನವು ಶನಿವಾರ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.…
ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಭೀತಿ ಎದುರಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜನರಿಗೆ ಮಾಸ್ಕ್…
ಮಗನ ಹೆಸರಲ್ಲಿ ಹೇಳಿಕೊಂಡಿದ್ದ ಹರಕೆ ತೀರಿಸಲು ಶಬರಿಮಲೆಗೆ ತೆರಳಿದ್ದ ಸುರತ್ಕಲ್ ಕಾಟಿಪಳ್ಳ ನಿವಾಸಿ ಸಂದೀಪ್ ಶೆಟ್ಟಿ (37) ಅವರು ಹೃದಯಾಘಾತದಿಂದ…
ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ…