ಅರಸೀಕೆರೆ: ಬೂಟಾಟಿಕೆ ಮಾತಿನ ರಾಜಕಾರಣವನ್ನು ನಾನು ಮಾಡಿಲ್ಲ. ಸರ್ಕಾರದ ನಾನಾ ಯೋಜನೆಗಳ ಮೂಲಕ ಸಾವಿರಾರು ಕೋಟಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ತಂದಿದ್ದೇನೆ ಮುಂದಿನ ದಿನಗಳಲ್ಲಿ ಒಂದು ಪುಸ್ತಕ ಮಾಡಿ ಮತದಾರರಿಗೆ ನೀಡಿ ಮತ ಕೇಳುತ್ತೇನೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.
ನಗರದ ಹೊರವಲಯದ ಕಂತೆನ ಹಳ್ಳಿ ಕೆರೆ ಏರಿ ಮೇಲೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೬ ಟಿಎಚ್ ರಸ್ತೆ ಅಭಿವೃದ್ಧಿಗೆ ೪ ಕೋಟಿ ಅನುದಾನವನ್ನು ಲೋಕೋ ಪಯೋಗಿ ಇಲಾಖೆ ಬಿಡುಗಡೆ ಮಾಡಿದ್ದು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಗರ ಗ್ರಾಮೀಣ ಭಾಗ ಎಂಬ ತಾರತಮ್ಯವಿಲ್ಲದೆ ಕ್ಷೇತ್ರದ ಜನತೆಗೆ ಶುದ್ಧ ಕುಡಿಯುವನೀರು, ಸಂಚರಿಸಲು ರಸ್ತೆ ನಿರ್ಮಾಣ ಹೀಗೆ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಕ್ರಾಂತಿಯೇ ಆಗಿದೆ.
ನಾನು ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಜನತೆಯ ಮುಂದಿಟ್ಟು ಮತ ಕೇಳುತ್ತೇನೆಯೇ ವಿನಹ ಪೊಳ್ಳು ಆಶ್ವಾಸನೆಗಳ ರಾಜಕಾರಣವನ್ನ ಇಂದೇ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ ಎಂದು ಹೇಳಿದರು.
ನಗರೋತ್ತಾನ ನಾಲ್ಕನೇ ಹಂತದ ಯೋಜನೆ ಅಡಿ ವಿಶೇಷ ವಾಗಿ ನಗರ ಸಭೆಗೆ ೩೦ ಕೋಟಿ ಅನುದಾನ ತಂದಿದ್ದು ಈಗಾಗಲೇ ವಾರ್ಡ್ ವಾರ್ ನಡೆಸಿರುವ ಪರ್ಯಟನೆಯಲ್ಲಿ ವಾರ್ಡ್ ನ ಚುನಾಯಿತ ಸದಸ್ಯರು ಹಾಗೂ ಸಾರ್ವಜನಿಕರು ಅಪೇಕ್ಷಿಸಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಈ ವಾರದಿಂದಲೇ ಚಾಲನೆ ದೊರೆಯಲಿದೆ ಅಂದುಕೊಂಡಂತೆ ಎಲ್ಲವೂ ನಡೆದರೆ ನಗರ ಮಾದರಿ ನಗರವಾಗಿ ಹೊರಹೊಮ್ಮುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯ ಪ್ರಭಾರ ಅಧ್ಯಕ್ಷ ಕಾಂತೇಶ್ ಮಾತನಾಡಿ ಶಾಸಕ ಶಿವಲಿಂಗೇಗೌಡರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ನಗರ ವ್ಯಾಪ್ತಿ ಯಲ್ಲಿ ಹಲವು ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಲನೆ ದೊರೆಯಲಿದ್ದು ಇದರಿಂದ ಚುನಾಯಿತ ಜನಪ್ರತಿ ನಿಧಿಗಳಿಗೆ ಉತ್ತಮ ಹೆಸರು ಬರುತ್ತದೆ ಎಂದರು.
ಸಮಾರಂಭದಲ್ಲಿ ನಗರಸಭೆ ಸದಸ್ಯರಾದ ಡಿಶ್ ರಾಜು, ವೆಂಕಟಮುನಿ, ಮನೋರ ಮೇಸ್ತ್ರಿ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್,ಲೋಕೋ ಬಗ್ಗೆ ಇಲಾಖೆಯ ಎಇಇ ಮುನಿರಾಜು, ಮುಖಂಡರಾದ ಗಿರೀಶ್,ಕೃಷ್ಣ, ಶಶಿಧರ್, ಟಿಪ್ಪು, ಯುವರಾಜ್, ಸುಧಾಕರ್, ಗುತ್ತಿಗೆದಾರ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.