ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿಯ ಕೆರೆಗೆ ಮೀನು ಹಿಡಿಯಲು ತೆರಳಿದ್ದಂತ ಇಬ್ಬರು ಆಯತಪ್ಪಿ ಬಿದ್ದು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿಯ ಮಂಜುನಾಥ್ ( 32 ) ಹಾಗೂ ಪ್ರತಾಪ್ (33) ಎಂಬುವರು ಕೆರೆಯಲ್ಲಿ ಮೀನು ಹಿಡಿಯೋದಕ್ಕೆ ಗ್ರಾಮದ ಸಮೀಪದ ಹೊಸಕೆರೆಗೆ ತೆರಳಿದ್ದರು.
ಇಬ್ಬರು ಮೀನು ಹಿಡಿಯುತ್ತಿದ್ದಂತ ಸಂದರ್ಭದಲ್ಲಿ ಕಾಲು ಜಾರಿ ಕೆರೆಯ ನೀರಿನಲ್ಲಿ ಓರ್ವ ಬಿದ್ದಾಗ ಮತ್ತೋರ್ವ ಆತನನ್ನು ರಕ್ಷಿಸಲು ಹೋಗಿ, ಇಬ್ಬರು ಧಾರುಣವಾಗಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಮೃತ ಮಂಜುನಾಥ್, ಪ್ರತಾಪ್ ಮೃತದೇಹಕ್ಕಾಗಿ ಹೊಸಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.