ನಂಜನಗೂಡು: ತಾಲ್ಲೂಕಿನ ದೇವಿರಮ್ಮನಹಳ್ಳಿ ಗ್ರಾಮದಲ್ಲಿ ನಂಜನಗೂಡಿನ ಬಿ.ವಿ ಪಂಡಿತರ ಶ್ರೀ ಧನ್ವಂತರಿ ಆರೋಗ್ಯ ಆಶ್ರಮದಿಂದ ಉಚಿತ ಆಯುರ್ವೇದಿಕ್ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ಅನುರಾಗ ಮಕ್ಕಳ ಮನೆ ಸಹಯೋಗದಲ್ಲಿ ಗ್ರಾಮದ ದೇವಿರಮ್ಮನ ದೇವಾಲಯದ ಮುಂಭಾಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಬಿಪಿ, ಶುಗರ್, ಮಂಡಿ ನೋವು ಸೇರಿದಂತೆ ವಿವಿಧ ಕಾಯಿಲೆಗಳಿಗೆ ತಪಾಸಣೆ ಮಾಡಿಸಿಕೊಂಡರು.

ಬಳಿಕ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಗೌರವಾಧ್ಯಕ್ಷ ದೇವೀರಮ್ಮನಹಳ್ಳಿ ನಂದೀಶ್ ಮಾತನಾಡಿ, ಇಂಗ್ಲಿಷ್ ಮೆಡಿಸನ್ ಪದ್ಧತಿಯಿಂದ ಕ್ಷಣಮಾತ್ರದಲ್ಲಿ ರೋಗಗಳು ಗುಣವಾಗಬಹುದು. ಆದರೆ ಆಯುರ್ವೇದಿಕ್ ಪದ್ಧತಿಯಲ್ಲಿ ಚಿಕಿತ್ಸೆ ಮಾಡಿಸಿದಾಗ ಕಾಯಿಲೆಗಳು ವಾಸಿಯಾಗುವುದು ಸ್ವಲ್ಪ ತಡವಾದರೂ ಯಾವುದೇ ಬಾಧ್ಯತೆಗಳು ಮುಂದಿನ ದಿನಗಳಲ್ಲಿ ಕಾಣಿಸುವುದಿಲ್ಲ.

ಇಂತಹ ಶಿಬಿರಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆ ಇನ್ನೂ ಹೆಚ್ಚಿನ ಶಿಬಿರಗಳನ್ನು ತಾಲ್ಲೂಕಿನಾದ್ಯಂತ ಉಚಿತವಾಗಿ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಈ ಶಿಬಿರದಲ್ಲಿ ಕಬ್ಬು ಬೆಳೆಗಾರರ ಸಂಘದ ಗೌರವಾಧ್ಯಕ್ಷ ನಂದೀಶ್, ಹಾಡ್ಯ ರವಿ, ಕಸುವಿನಹಳ್ಳಿ ಮಂಜೇಶ್ ಕುಮಾರ್, ಅನುರಾಗ ಮಕ್ಕಳ ಮನೆಯ ಸಂಸ್ಥಾಪಕ ಸೋಮಶೇಖರ್ ಮೂರ್ತಿ, ಶಿವಕುಮಾರ್, ಮಹೇಶ, ಗ್ರಾಮದ ಮುಖಂಡರಾದ ಕುಮಾರ್, ಶಿವಮೂರ್ತಿ, ಲೋಕೇಶ್, ವಸಂತ, ಸಿದ್ದರಾಜು, ಪಟೇಲ್ ಮಹದೇವಪ್ಪ, ಸ್ವಾಮಿ, ಸಂತೋಷ, ಮಹೇಶ್, ಶಿವ ಬುದ್ದಿ, ಮುದ್ದಹಳ್ಳಿ ಕುಮಾರ್, ವಸಂತ್ ಕುಮಾರ್, ರಾಜಶೇಖರ್, ನಟೇಶ್, ಸ್ವಾಮಿ, ಬಿ.ವಿ ಪಂಡಿತರ ಆರೋಗ್ಯ ಆಶ್ರಮದ ವೈದ್ಯಾಧಿಕಾರಿಗಳಾದ ಡಾ. ಸುಶ್ಮಿತಾ ರಮೇಶ್, ಡಾ. ಅನುರಾಧ, ಡಾ. ನರ್ಮತ ಡಾ. ಆರ್ ಕೃಷ್ಣ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.