ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಕಾಡುನಾಯಿ ಹಿಂಡು, ಭಾರಿ ದಂತದ ಆನೆ ಕಾಣಿಸಿಕೊಂಡಿದ್ದು, ವನ್ಯ ಪ್ರಾಣಿಗಳನ್ನ ಕಂಡು ಪ್ರವಾಸಿಗರು ಫಿದಾ ಆಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿ ಕೇಂದ್ರದಿಂದ ಸಫಾರಿಗೆ ತೆರಳಿದ ಪರಿಸರ ಪ್ರೇಮಿಗಳಿಗೆ ಕಾಡಾನೆ , ಕಾಡು ನಾಯಿ ಹಿಂಡು ಕಾಣಿಸಿಕೊಂಡು ಸಖತ್ ಖುಷಿಯಾಗಿದ್ದಾರೆ.
ಅಪರೂಪಕ್ಕೆ ಎಂಬಂತೆ ಏಳು ಕಾಡುನಾಯಿಗಳ ಹಿಂಡು ಒಂದೆಡೆ ಕಾಣಿಸಿಕೊಂಡರೆ, ಭಾರಿ ದಂತ ಇರುವ ಆನೆಯೊಂದು ಎತ್ತರ ಪ್ರದೇಶದಲ್ಲಿ ನಿಂತು ಪ್ರವಾಸಿಗರಿಗೆ ಫೋಸ್ ನೀಡಿದ್ದು ವಿಶೇಷವಾಗಿತ್ತು, ಇವೆರಡರ ದೃಶ್ಯ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.