ಗುಂಡ್ಲುಪೇಟೆ: ಕುರಿಗಾಹಿಗಳ ಮೇಲೆ ಎರಗಿದ ಹುಲಿಯು ಇಬ್ಬರಿಗೆ ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶಿವಪುರ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಶಿವಪುರ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು , ಏಕಾಏಕಿ ಕುರಿಹಿಂಡಿನ ಮೇಲೆ ಎರಗಿ ಬಂದ ಹುಲಿಯನ್ನ ಹಿಮ್ಮೆಟ್ಟಿಸಲು ಹೋದ ಜವರಶೆಟ್ಟಿ ಮತ್ತು ಶಿವಶೆಟ್ಟಿ ಎಂಬವರ ಮೇಲೆ ದಾಳಿ ನಡೆಸಿದ ವ್ಯಾಘ್ರ ಎದೆ, ಮೊಣಕಾಲು, ತೊಡೆ ಬೆನ್ನಿಗೆ ಪರಚಿ ಗಾಯಗೊಳಿಸಿದೆ, ಹುಲಿ ದಾಳಿಯಿಂದ ಜೋರಾಗಿ ಚೀರಾಡಿದ ಬೆನ್ನಲ್ಲೇ ಹುಲಿ ಅಲ್ಲಿಂದ ಕಾಲ್ಕಿತ್ತಿದ್ದು ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಗ್ರಾಮದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ವ್ಯಾಘ್ರನ ಸೆರೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.