News Karnataka Kannada
Wednesday, May 01 2024
ಚಾಮರಾಜನಗರ

ತಮಿಳುನಾಡಿನ ಸರಕಾರಿ ಬಸ್ ಬಳಿ ಬಂದ ಕಾಡಾನೆ: ಪ್ರಯಾಣಿಕರು ತಬ್ಬಿಬ್ಬು

Tamil Nadu government bus in Tamil Nadu: Wild elephant approaches bus
Photo Credit : News Kannada

ಚಾಮರಾಜನಗರ: ಕಾಡಿನ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಾಡಾನೆಯೊಂದು ತಮಿಳುನಾಡಿನ ಸರಕಾರಿ ಬಸ್ ನ ಬಳಿ ಬಂದ ಹಿನ್ನಲೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಬ್ಬಿಬ್ಬಾದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಬಳಿ ತಮಿಳುನಾಡಿನ ಸತ್ಯಮಂಗಲಂ ನತ್ತ 30 ಪ್ರಯಾಣಿಕರಿದ್ದ ತಮಿಳುನಾಡಿನ ಸರಕಾರಿ ಬಸ್ ತೆರಳುತ್ತಿದ್ದಾಗ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ ಕಾಡಾನೆಯೊಂದು ಬಸ್ ಬಳಿ  ಬಂದಾಗ ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಯಾದರು.

ಏಕಾಏಕಿ ಬಸ್ ಬಳಿ ಕಾಡಾನೆಯೊಂದು ಬಂದು ನಿಂತಿದ್ದರಿಂದ ಬಸ್ ಚಾಲಕ ಸೇರಿದಂತೆ ಪ್ರಯಾಣಿಕರು ಭಯಭೀತಾಗಿದ್ದರು. ಕೆಲ ಹೊತ್ತಿನ ಬಳಿಕ ಕಾಡಾನೆ ಕಾಡಿನತ್ತ ತೆರಳಿದ ಬಳಿಕ ಬಸ್ ಸತ್ಯಮಂಗಲಂ ಕಡೆ ಹೊರಟ ಬಳಿಕ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು