ಚಾಮರಾಜನಗರ: ಕಾಡಿನ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಾಡಾನೆಯೊಂದು ತಮಿಳುನಾಡಿನ ಸರಕಾರಿ ಬಸ್ ನ ಬಳಿ ಬಂದ ಹಿನ್ನಲೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಬ್ಬಿಬ್ಬಾದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಬಳಿ ತಮಿಳುನಾಡಿನ ಸತ್ಯಮಂಗಲಂ ನತ್ತ 30 ಪ್ರಯಾಣಿಕರಿದ್ದ ತಮಿಳುನಾಡಿನ ಸರಕಾರಿ ಬಸ್ ತೆರಳುತ್ತಿದ್ದಾಗ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ ಕಾಡಾನೆಯೊಂದು ಬಸ್ ಬಳಿ ಬಂದಾಗ ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಯಾದರು.
ಏಕಾಏಕಿ ಬಸ್ ಬಳಿ ಕಾಡಾನೆಯೊಂದು ಬಂದು ನಿಂತಿದ್ದರಿಂದ ಬಸ್ ಚಾಲಕ ಸೇರಿದಂತೆ ಪ್ರಯಾಣಿಕರು ಭಯಭೀತಾಗಿದ್ದರು. ಕೆಲ ಹೊತ್ತಿನ ಬಳಿಕ ಕಾಡಾನೆ ಕಾಡಿನತ್ತ ತೆರಳಿದ ಬಳಿಕ ಬಸ್ ಸತ್ಯಮಂಗಲಂ ಕಡೆ ಹೊರಟ ಬಳಿಕ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.