News Karnataka Kannada
Monday, April 29 2024
ಚಾಮರಾಜನಗರ

ವಿದ್ಯಾರ್ಥಿಗೆ ಕುಕ್ಕಿದ ಕೋಳಿ: ಶಾಲೆ ಬಂದ್ ಮಾಡಿಸಿದ ಎಸ್ ಡಿಎಂಸಿ

SDMC shuts down school after student gets chicken
Photo Credit : News Kannada

ಚಾಮರಾಜನಗರ: ಶಾಲೆಗೆ ಸರಿಯಾದ ವ್ಯವಸ್ಥೆಯನ್ನು ಇಲಾಖೆಯು ಮಾಡಿಲ್ಲದ ಪರಿಣಾಮ ಮಕ್ಕಳಿಗೆ ಕೋಳಿಯೊಂದು ಕುಕ್ಕಿ ಗಾಯಗೊಳಿಸಿದೆ ಎಂದು ಆರೋಪಿಸಿ  ಶಾಲೆಯ ಎಸ್ ಡಿ ಎಂ ಸಿ ಸಮಿತಿಯವರು ಶಾಲೆಗೆ ಬೀಗ ಹಾಕಿದ ಘಟನೆ ಚಾಮರಾಜನರ ಜಿಲ್ಲೆಯ ಹನೂರು ತಾಲ್ಲೂಕಿನ ಪೆದ್ದನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೆದ್ದನ ಪಾಳ್ಯ ಶಾಲೆಯಲ್ಲಿ ಒಂದನೇ ತರಗತಿ ಮಗುವಿಗೆ ಕೋಳಿ  ಕಚ್ಚಿ ಗಾಯ ಮಾಡಿ  ತೊಂದರೆಯಾಗಿದ್ದು ಇಲಾಖೆಯೂ ಸರಿಯಾದ ರೀತಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಶಾಲಾ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ವಿನಾಕಾರಣ  ಹಸು ಕರುಗಳನ್ನು ಕಟ್ಟುತ್ತಿದ್ದು ಜೊತೆಗೆ ಕೋಳಿಗಳನ್ನು ಸಹ ಸಾಕುತ್ತಿದ್ದು, ಖಾಸಗಿ ವ್ಯಕ್ತಿಗಳು ಶಾಲಾ ಜಾಗವನ್ನು ನಮ್ಮದು ಎಂದು ಈಗಾಗಲೇ ಕೋರ್ಟ್ ಮೊರೆ ಹೋಗಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ಬಂದ ಮಾಹಿತಿ ಆದರೆ ನಲಿಕಲಿ ಮಗುವಿಗೆ ಕೋಳಿಯೊಂದು ಕಚ್ಚಿ ಗಾಯ ಮಾಡಿದ್ದು ತುಂಬಾ ತೊಂದರೆಯಾಗಿದೆ ಎಂಬುದು ಎಸ್ ಡಿ ಎಂ ಸಿಯವರ ವಾದವಾಗಿದೆ.

ಶಾಲೆಯ ಸ್ಥಳ ದಾಖಲಾತಿಯಲ್ಲಿ ಶಾಲೆಯ ಹೆಸರಲ್ಲಿ ಇಲ್ಲದ ಪರಿಣಾಮ, ಖಾಸಗಿ  ವ್ಯಕ್ತಿ ಶಾಲೆಗೆ ಜಾಗ ನೀಡಿದವರೇ ಈಗ  ಇದನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಶಾಲೆಗೆ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ಸಹ ಶಾಲೆ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಎಸ್ ಡಿಎಂಸಿಯವರು ಶಾಲೆಗೆ ಬೀಗ ಹಾಕಿದ್ದಾರೆ.

ಬಳಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆಗೆ ಎಸ್ ಡಿ ಎಂ ಸಿ ಜೊತೆಗೆ ಚರ್ಚೆ ಮಾಡಿ ಶಾಲೆಯನ್ನು ತೆರೆಯಲು ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು