ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ರಾಮಮಂದಿರ ಕಟ್ಟುವುದಕ್ಕಿಂತ ರಾಮರಾಜ್ಯ ನಿರ್ಮಾಣ ಆಗಬೇಕು ಎಂದು ಅವರು ಹೇಳಿದ್ದಾರೆ.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಭರವಸೆ ಈಡೇರಿಸಿಲ್ಲ. ಆದರೂ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ, ರಾಮಮಂದಿರ ಮಾಡುವುದು ಗ್ಯಾರಂಟೀನಾ ಎಂದು ಪ್ರಶ್ನಿಸಿದ್ದಾರೆ.
ಸಮಾಜದಲ್ಲಿ ಸಮಾನತೆ ಆದಾಗ, ಹಸಿವು ಮುಕ್ತ ಆದಾಗ ಹಾಗೂ ಯುವಕರಿಗೆ ಸರಿಯಾದ ಶಿಕ್ಷಣ ಉದ್ಯೋಗ ಜೊತೆಗೆ ಮಹಿಳೆಯರಿಗೆ ರಕ್ಷಣೆ ಸಿಕ್ಕಾಗ ರಾಮರಾಜ್ಯ ಆಗುತ್ತದೆ. ದೇವರು ಸಾಕ್ಷಾತ್ಕಾರ ಆಗಬೇಕಾದ್ರೆ ದೊಡ್ಡ ದೊಡ್ಡ ಭವ್ಯವಾದ ದೇವಸ್ಥಾನ ಕಟ್ಟಬೇಕಿಲ್ಲ. ಸಾವಿರಾರು ವರ್ಷಗಳಿಂದ ಹಿಂದೂ ಧರ್ಮ ಇದೆ, ನೂರಾರು ದೇವಸ್ಥಾನಗಳಿವೆ. ಆದ್ರೆ, ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಹೋಗಿಲ್ಲ ಎಂದು ಕಿಡಿಕಾರಿದರು.