News Karnataka Kannada
Monday, April 29 2024
ಚಾಮರಾಜನಗರ

ನಿಫಾ ವೈರಸ್ ಹೆಚ್ಚಳ ಹಿನ್ನೆಲೆ: ಅಂತರಾಜ್ಯ ಗಡಿಭಾಗದಲ್ಲಿ ಬಿಗಿ ತಪಾಸಣೆ

Nipah virus surge: Tight checking at inter-state border
Photo Credit : News Kannada

ಗುಂಡ್ಲುಪೇಟೆ: ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಸೋಂಕು ಹೆಚ್ಚಾದ ಹಿನ್ನೆಲೆ ಗುಂಡ್ಲುಪೇಟೆಯ ಎರಡು ಅಂತರಾಜ್ಯ ಗಡಿಭಾಗಗಳಾದ ಮೂಲೆಹೊಳೆ ಮತ್ತು ಕೆಕ್ಕನಹಳ್ಳ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳಬೇಕು ಎಂದು ಕರ್ನಾಟಕ ಕಾವಲುಪಡೆ ಸದಸ್ಯರು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನೆರೆ ಕೇರಳದಲ್ಲಿ ಮೊದಲಿಗೆ ಇಬ್ಬರಲ್ಲಿ ಕಾಣಿಸಿಕೊಂಡಿದ್ದ ನಿಫಾ ವೈರಾಣು ಕ್ರಮೇಣ ತನ್ನ ಬಾಹುಳ್ಯವನ್ನ ವಿಸ್ತರಿಸುತ್ತಿರುವ ಹಿನ್ನೆಲೆ ಗಡಿಭಾಗದ ಜನರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಆರೋಗ್ಯ ಇಲಾಖೆ ಬಿಗಿ ತಪಾಸಣೆ ಕ್ರಮ ಕೈಗೊಂಡು ಜನತೆಗಿರುವ ಭೀತಿಯನ್ನ ಹೋಗಲಾಡಿಸಲು ಮುಂದಾಗಬೇಕು. ಕೇರಳದಿಂದ ಗಡಿ ಪ್ರವೇಶಿಸುವ ಎಲ್ಲಾ ವಾಹನಗಳಿಗೆ ಸ್ಯಾನಿಟೈಸಿಂಗ್ ಮತ್ತು ವಾಹನ ಚಾಲಕರನ್ನ ತಪಾಸಣೆಗೆ ಒಳಪಡಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ಸಂಘಟನೆ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲಿಕ್ ಸೇರಿದಂತೆ ಸದಸ್ಯರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು