ಗುಂಡ್ಲುಪೇಟೆ: ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಸೋಂಕು ಹೆಚ್ಚಾದ ಹಿನ್ನೆಲೆ ಗುಂಡ್ಲುಪೇಟೆಯ ಎರಡು ಅಂತರಾಜ್ಯ ಗಡಿಭಾಗಗಳಾದ ಮೂಲೆಹೊಳೆ ಮತ್ತು ಕೆಕ್ಕನಹಳ್ಳ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳಬೇಕು ಎಂದು ಕರ್ನಾಟಕ ಕಾವಲುಪಡೆ ಸದಸ್ಯರು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನೆರೆ ಕೇರಳದಲ್ಲಿ ಮೊದಲಿಗೆ ಇಬ್ಬರಲ್ಲಿ ಕಾಣಿಸಿಕೊಂಡಿದ್ದ ನಿಫಾ ವೈರಾಣು ಕ್ರಮೇಣ ತನ್ನ ಬಾಹುಳ್ಯವನ್ನ ವಿಸ್ತರಿಸುತ್ತಿರುವ ಹಿನ್ನೆಲೆ ಗಡಿಭಾಗದ ಜನರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಆರೋಗ್ಯ ಇಲಾಖೆ ಬಿಗಿ ತಪಾಸಣೆ ಕ್ರಮ ಕೈಗೊಂಡು ಜನತೆಗಿರುವ ಭೀತಿಯನ್ನ ಹೋಗಲಾಡಿಸಲು ಮುಂದಾಗಬೇಕು. ಕೇರಳದಿಂದ ಗಡಿ ಪ್ರವೇಶಿಸುವ ಎಲ್ಲಾ ವಾಹನಗಳಿಗೆ ಸ್ಯಾನಿಟೈಸಿಂಗ್ ಮತ್ತು ವಾಹನ ಚಾಲಕರನ್ನ ತಪಾಸಣೆಗೆ ಒಳಪಡಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲಿಕ್ ಸೇರಿದಂತೆ ಸದಸ್ಯರು ಹಾಜರಿದ್ದರು.