News Karnataka Kannada
Tuesday, April 30 2024
ಚಾಮರಾಜನಗರ

ಕುಂದಗೋಳದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪೂರ್ವಭಾವಿ ಸಭೆ

ಪೋಲಿಯೊ ಬಗ್ಗೆ ಎಲ್ಲರೂ ಜಾಗೃತರಾಗಿ, ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿದ್ಯಾವತಿ ಪಾಟೀಲ ಹೇಳಿದರು.
Photo Credit : News Kannada

ಕುಂದಗೋಳ: ಪೋಲಿಯೊ ಬಗ್ಗೆ ಎಲ್ಲರೂ ಜಾಗೃತರಾಗಿ, ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿದ್ಯಾವತಿ ಪಾಟೀಲ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, 0-5 ವರ್ಷದ ಒಟ್ಟು 14,498 ಮಕ್ಕಳಿಗೆ ಈ ಬಾರಿ ಮಾರ್ಚ್ 3 ರಿಂದ ಪೋಲಿಯೊ ಹನಿ ಹಾಕಲಾಗುವುದು. 99 ಬೂತ್‌ಗಳಲ್ಲಿ 396 ಸದಸ್ಯರು, 104 ಗುಂಪುಗಳು, 19 ಮೇಲ್ವಿಚಾರಕರು ಇತರೆ ಸಹಾಯಕರು ಕಾರ್ಯ ನಿರ್ವಹಿಸಲಿದ್ದಾರೆ’ ಎಂದರು.

6 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಪೋಲಿಯೊ ಲಸಿಕೆ ತಲುಪಿಸಲಾಗಿದೆ. ಭಿತ್ತಿ ಪತ್ರ, ಧ್ವನಿ ವರ್ಧಕ, ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪೋಲಿಯೊ ಕಾರ್ಯಕ್ರಮದಂದು ಹೊರಗುಳಿದ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲಾಗುವುದು’ ಎಂದು ಮಾಹಿತಿ ನೀಡಿದರು.

ಹೆಸ್ಕಾಂ ಎಂಜಿನಿಯರ್ ವಿರೇಶ್ ಮಠದ, ಸಿಡಿಪಿಒ ಶಂಶಾದ ಕಂದಗಲ್, ರವೀಂದ್ರ ಬೋವಿಯಾರ್, ಜೆ.ಜೆ ಕಟಾಪುರಿಮಠ, ಮಹೇಶ ಶಾನಬಾಳ, ವಿರೇಶ ಅಂಗಡಿ, ಮಾಲಾ ಕರಡಿಗುದ್ದು, ಡಾ. ಸಂಜನಾ ಪಾಟೀಲ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು