ತಿ.ನರಸೀಪುರ: ತಾಲ್ಲೂಕಿನಲ್ಲಿ ಚಿರತೆಯ ಹಾವಳಿ ಮುಂದುವರೆದಿದ್ದು ಬನ್ನೂರು ಹೋಬಳಿಯ ನುಗ್ಗನಹಳ್ಳಿ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮೇಲೆ ದಾಳಿ ಮಾಡಿ ಕುರಿಯನ್ನು ಕೊಂದು ಹಾಕಿ ಪರಾರಿಯಾಗಿದೆ.
ನುಗ್ಗನಹಳ್ಳಿ ಗ್ರಾಮದ ಬಾಲರಾಜು ಎಂಬುವರರಿಗೆ ಸೇರಿದ ಕುರಿ ಮತ್ತು ಮೇಕೆ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದೆ. ಬಾಲರಾಜು ಅವರು ಎಂದಿನಂತೆ ಕುರಿ ಮತ್ತು ಮೇಕೆಗಳನ್ನು ಊರ ವಲಯದಲ್ಲಿ ಮೇಯಿಸಿಕೊಂಡು ಬರುವಾಗ ಸಂಜೆ 5.30 ರ ಸಮಯದಲ್ಲಿ ಚಿರತೆ ಏಕಾ ಏಕಿ ದಾಳಿ ನಡೆಸಿದ್ದು ಚಿರತೆದಾಳಿಯಿಂದ ಗಾಬರಿಗೊಂಡ ಕುರಿಗಳು ದಿಕ್ಕಪಾಲಾಗಿ ಓಡಿಹೋಗಿವೆ. ಇದರಿಂದ ಕಂಗಾಲಾದ ಬಾಲರಾಜು ಮತ್ತು ಮನೆಯವರು ಓಡಿಹೋದ ಕುರಿಗಳಿಗಾಗಿ ಹುಡುಕಾಟ ನಡೆಸಿದ ವೇಳೆ ತಿವ್ರ ದಾಳಿಗೊಳಗಾಗಿ ಸತ್ತು ಬಿದ್ದಿದ್ದ ಕುರಿ ಸಿಕ್ಕಿದೆ ಮತ್ತೊಂದು ಮೇಕೆ ಸಿಕ್ಕಿಲ್ಲ ಎಂದು ಬಾಲರಾಜು ತಿಳಿಸಿದ್ದಾರೆ.
ಕುರಿ ಮೇಕೆ ಸಾಕಾಣಿಕೆ ಮಾಡಿಕೊಂಡು ನಮ್ಮ ಕುಟುಂಬದ ಜೀವನ ಸಾಗಿಸುತಿದ್ದೇವೆ ಚಿರತೆ ದಾಳಿಯಿಂದ ಸುಮಾರು 50 ಸಾವಿರ ಬೆಲೆ ಬಾಳುವ ಕುರಿ ಮೇಕೆ ಕಳೆದುಕೊಂಡಿದ್ದೇನೆ ಮುಂದೆ ಯಾವ ತರ ನಾವು ಜೀವನ ಸಾಗಿಸುವುದು ಎಂಬ ಚಿಂತೆ ಎದುರಾಗಿದೆ ಎಂದು ಬಾಲರಾಜು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿದ ರೈತ ಮುಖಂಡ ಬನ್ನೂರು ನಾರಾಯಣ್ ಅವರು, ಕಳೆದ ಎರಡು ತಿಂಗಳಿನಿಂದ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದೆ ಈಗಾಗಲೇ ಇಬ್ಬರು ವಿದ್ಯಾರ್ಥಿಗಳ ಜೀವ ತೆಗೆದಿದೆ. ಈ ನಡುವೆ ಯಾಚನಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಮೇಲೆ ದಾಳಿ ನಡೆಸಿದೆ ಈಗ ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿದ್ದು, ಇದೇ ರೀತಿ ಚಿರತೆ ದಾಳಿ ಮುಂದುವರೆದರೆ ರೈತರು ಬದುಕುವುದಾದರು ಹೇಗೆ ಅರಣ್ಯ ಇಲಾಖೆಯವರು ಚಿರತೆ ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ದೂರಿದ್ದಾರೆ.
ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…
ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.
ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…
ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…