News Karnataka Kannada
Sunday, April 28 2024
ಚಾಮರಾಜನಗರ

ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೊಂದು ರೂಲ್ಸ್: ಬೇಸತ್ತು ಹೋದ ರೋಗಿಗಳು

ಸಾರ್ವಜನಿಕರಿಗೆ ಸಂಜೀವಿನಿಯಾಗಬೇಕಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೊಂದು ರೂಲ್ಸ್ ನೋಡಿ ಚಿಕಿತ್ಸೆಗೆ ಬರೋ ರೋಗಿಗಳು ಬೇಸತ್ತು ಹೋಗಿದ್ದಾರೆ, ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ್ರೆ ಇಲ್ಲಿ ಇವರ ರೂಲ್ಸ್ ಗಳನ್ನ ನೋಡಿ ಚಿಕಿತ್ಸೆ ಪಡೆಯುವ ವೇಳೆಗೆ ರೋಗಿಯು ಮತ್ತಷ್ಟು ಕುಗ್ಗಿಹೋಗ್ತಾನೆ.
Photo Credit : News Kannada

ಗುಂಡ್ಲುಪೇಟೆ: ಸಾರ್ವಜನಿಕರಿಗೆ ಸಂಜೀವಿನಿಯಾಗಬೇಕಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೊಂದು ರೂಲ್ಸ್ ನೋಡಿ ಚಿಕಿತ್ಸೆಗೆ ಬರೋ ರೋಗಿಗಳು ಬೇಸತ್ತು ಹೋಗಿದ್ದಾರೆ, ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ್ರೆ ಇಲ್ಲಿ ಇವರ ರೂಲ್ಸ್ ಗಳನ್ನ ನೋಡಿ ಚಿಕಿತ್ಸೆ ಪಡೆಯುವ ವೇಳೆಗೆ ರೋಗಿಯು ಮತ್ತಷ್ಟು ಕುಗ್ಗಿಹೋಗ್ತಾನೆ.

ಈ ಮುಂಚೆ ಆಸ್ಪತ್ರೆಗೆ ಬರ್ತಿದ್ದ ರೋಗಿಗಳಿಗೆ ಸಲೀಸಾಗಿ ಹೊರರೋಗಿ ವಿಭಾಗದ ಚೀಟಿಯನ್ನ ನೀಡಲಾಗುತ್ತಿತ್ತು ಇದ್ರಿಂದ ಯಾವ ಸಮಸ್ಯೆಯು ಇರ್ಲಿಲ್ಲ, ಆದ್ರೆ ಕಳೆದ ಒಂದು ವಾರಗಳಿಂದ ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿ ಟೋಕನ್ ವ್ಯವಸ್ಥೆ ಮಾಡಿದ್ದಾರೆ, ಈ ಟೋಕನ್ ಪಡೆಯೋಕೆ ಗಂಟೆಗಟ್ಟಲೆ ಕಾಯ್ಬೇಕು ಇಷ್ಟಾದ್ರೆ ಸರಿ ನಂತರ ಒಪಿಡಿ ರಶೀದಿ ಪಡೆಯೋದಕ್ಕೂ ಸಹ ಗಂಟೆಗಟ್ಟಲೆ ಕಾಯ್ಲೇ ಬೇಕು, ಇರೋದು ಒಂದೇ ಕೌಂಟರ್, ಇಲ್ಲಿ ಚೀಟಿ ಪಡೆದು ವೈದ್ಯರ ಬಳಿ ತೆರಳುವ ವೇಳೆಗೆ ರೋಗಿಯು ನಿತ್ರಾಣನಾಗಿಬಿಡ್ತಾನೆ.

ಒಬ್ಬ ರೋಗಿಗೆ 10 ನಿಮಿಷಗಳ ಕಾಲ ಸಮಯ ಆಗುತ್ತೆ ಇದ್ರಿಂದ ಸಕಾಲಕ್ಕೆ ವೈದ್ಯರ ಸೇವೆ ಸಿಗುತ್ತಿಲ್ಲ, ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾರ್ವಜನಿಕರು ಪರಿತಪಿಸುವಂತಾಗಿದೆ ಎಂದು ರೋಗಿಯ ಸಂಬಂದಿ ವಿಶ್ವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡುವಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ವಿಫಲರಾಗಿದ್ದು ಆಧಾರ್ ಎಂಟ್ರಿ ನಿಯಮವನ್ನ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು