ಚಾಮರಾಜನಗರ: ವಾಹನ ನಿಲುಗಡೆ ಮಾಡುವಾಗ ಅವಘಡ ಸಂಭವಿಸಿ 7 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಪಾಲಾರ್ ರಸ್ತೆಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯೊಬ್ಬರು ಕಾರು ನಿಲುಗಡೆ ಮಾಡುವಾಗ ಆಕಸ್ಮಿಕವಾಗಿ ವಾಹನ ಚಲಿಸಿದಾಗ ಕಾರಿನ ಮುಂಭಾಗದಲ್ಲಿದ್ದ ತಮಿಳುನಾಡಿನ ಧರ್ಮಪುರಿ ಮೂಲಕ ಸುಶ್ಮಿತಾ (07) ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾಳೆ.
ಬೆಂಗಳೂರು ಮೂಲದ ಕಾರು ಮಾಲೀಕರ ಎಡವಟ್ಟಿನಿಂದಾಗಿ ಏಳು ವರ್ಷದ ಬಾಲಕಿ ಸಾವನ್ನಪ್ಪಿದಳು . ಮೃತ ಸುಶ್ಮಿತಾ ತಾತ ಅಜ್ಜಿಯೊಂದಿಗೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದಳು. ಪವಾಡ ಪುರುಷ ಮಲೆ ಮಹದೇಶ್ವರ ಸನ್ನಿದಿಯ ಬಳಿಯೇ ಪುಟ್ಟ ಬಾಲಕಿಯ ಪ್ರಾಣ ಪಕ್ಷಿ ಹಾರಿಹೋಗಿದ್ದು, ಸ್ಥಳೀಯರು ಕಾರು ಮಾಲೀಕರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.