News Karnataka Kannada
Thursday, May 02 2024
ಚಾಮರಾಜನಗರ

ಚಾಮರಾಜನಗರ: ನಗರದಲ್ಲಿ ನಡೆಯುತ್ತಿದೆ ಸಾಲುಮರಗಳ ಪೋಷಣೆ

The maintenance of rows of trees is going on in the city
Photo Credit : By Author

ಚಾಮರಾಜನಗರ: ಸಾಲು ಮರದ‌‌ ತಿಮ್ಮಪ್ಪ ಎಂದೇ ಹೆಸರಾದ ಲೆಕ್ಕ ಪರಿಷೋದಕ ವೆಂಕಟೇಶ್ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ದಶಕಗಳಿಂದ‌ ಲಾಲನೆ‌ ಪೋಷಣೆ ಮಾಡುತ್ತಿರುವುದು ವಿಶೇಷವಾಗಿದೆ.

ಈ ಪೈಕಿ ಕೆಲವು ಗಿಡಗಳು ಮರಗಳಾಗಿ ಕೆಲವು ಹೂಗಳನ್ನು ಬಿಟ್ಟು ನಗರದ ಸೌಂದರ್ಯವನ್ನು ಹೆಚ್ಚಿಸುತ್ತಿವೆ. ಇನ್ನು ಕೆಲವು ಕಾಯಿ ಹಣ್ಣು ಬಿಟ್ಟು ಪಶುಪಕ್ಷಿಗಳಿಗೆ ಆಹಾರವನ್ನು ನೀಡುತ್ತಿವೆ. ಈಗಾಗಲೇ ವಾಯುವಿಹಾರಿಗಳಿಗೆ ಯಥೇಚ್ಛವಾಗಿ ಆಕ್ಸಿಜನ್‌ ಸಿಗುತ್ತಿವೆ. ಈ ನಡುವೆ ಕೆಲವು ಗಿಡಗಳಿಗೆ ನಂಜು ರೋಗವಿರುವುದರಿಂದ ಅವುಗಳಿಗೆ ಔಷಧಿ ಸಿಂಪಡಿಸುವ ಕಾರ್ಯಕ್ಕೆ ನಡೆಸುತ್ತಿದ್ದಾರೆ.

ಯಾವುದೇ ಫಲಾಪೇಕ್ಷೆಯಿಲ್ಲದೆ, ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯದಲ್ಲಿ ತೊಡಗಿರುವ ವೆಂಕಟೇಶ್ ಅವರ ಸೇವೆಯನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ. ಈ ಕುರಿತಂತೆ ಮಾತನಾಡಿರುವ ವೆಂಕಟೇಶ್ ಅವರು,ನಗರದಲ್ಲಿ ಕೆಲವರು ತಮ್ಮ ಹುಟ್ಟು ಹಬ್ಬಗಳಿಗಳಿಗೆ‌ ಫ್ಲೆಕ್ಸ್ ಕಟೌಟ್ ಗಳನ್ನು ಹಾಕಿ‌‌, 2 ದಿನದ ಪ್ರಚಾರಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವುದರೊಂದಿಗೆ ನಗರದ‌ ಅಂದವನ್ನು‌ ಕೆಡಿಸುತ್ತಿರುತ್ತಾರೆ. ಅದರ ಬದಲಿಗೆ ಅವರದೇ ಹೆಸರಿನಲ್ಲಿ‌ ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡಿದರೆ ಅದರಿಂದ ಪರಿಸರ ಸಂರಕ್ಷಣೆಯೊಂದಿಗೆ ನೆಮ್ಮದಿಯೂ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು