ಚಾಮರಾಜನಗರ: ಕಡೆ ಕಾರ್ತಿಕ ಸೋಮವಾರದ ಹಿನ್ನಲೆಯಲ್ಲಿ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನ ಮಹಾಜೋತಿ ದರ್ಶನ, ಶ್ರೀ ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನ ಬಳಿ ನಡೆಯುವ ದೀಪೋತ್ಸವಕ್ಕೆ (ಮಹಾಜ್ಯೋತಿ ದರ್ಶನ) ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಸಂಜೆ ವಿಶೇಷ ಅಭಿಷೇಕ ಮಹಾ ಮಂಗಳಾರತಿ ನೈವೇದ್ಯ ನಂತರ ವಿಶೇಷ ಉತ್ಸವದೊಂದಿಗೆ ದೇವಾಸ್ಥಾನದ ದಕ್ಷಿಣ ದಿಕ್ಕಿನಲ್ಲಿರುವ ದೀಪದಗಿರಿ ಒಡ್ಡಿಗೆ ಉತ್ಸವ ಮೂರ್ತಿಯನ್ನು ಸಕಲ ಬಿರುದಾವಳಿಯೊಂದಿಗೆ ಶ್ರೀ ಸಾಲೂರು ಬೃಹನ್ಮಠದ ಶ್ರೀಗಳ ನೇತೃತ್ವದಲ್ಲಿ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಮೆರವಣಿಗೆ ಮಾಡುತ್ತಾ, ದೇವಸ್ಥಾನ ಆಗಮಿಕರು ಮತ್ತು ಬೇಡಗಂಪಣ ಅರ್ಚಕರು ಪುಣ್ಯಾಹ ಸ್ವಸ್ತಿವಾಚನ ಪಂಚಕಲಶದಿಕ್ಪಾಲಕರ ಪೂಜೆ ಹೋಮಹವನಾದಿ ಶುದ್ಧಿಕರಣ ಪೂಜೆ ಅನಂತರ ಮಹಾಜ್ಯೋತಿ ದೀಪಕ್ಕೆ ಷೋಡಶೋಪಚಾರ ಪೂಜೆ ಮಾಡಿ ಶ್ರೀ ಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಪೂಜಾಕಾರ್ಯವನ್ನು ನೆರವೇರಿಸಿಲಿದ್ದಾರೆ.