ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 27 ರಿಂದ 30 ರವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕವಿಗೋಷ್ಠಿ, ನಾಟಕಗಳ ಪ್ರದರ್ಶನ, ರಂಗಗೀತೆಗಳ ಗಾಯನ ಕಾರ್ಯಕ್ರಮಗಳು ನಡೆಯಲಿವೆ.
ಸೆ. 27 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕವಿಗೋಷ್ಠಿ, ಮಧ್ಯಾಹ್ನ 2ರಿಂದ 4 ರವರೆಗೆ ಚಾಮರಾಜನಗರದ ಆತ್ಮೀಯ ಪ್ರಯೋಗಾಲಯ ಟ್ರಸ್ಟ್ ಅವರಿಂದ ಮಾಧ್ಯಮ ವ್ಯಾಯೋಗ ಸಾಮಾಜಿಕ ನಾಟಕ, ಸಂಜೆ 4ರಿಂದ 6ರವರೆಗೆ ಕಲ್ಪವೃಕ್ಷ ತಂಡದವರಿಂದ ಯಥಾಪ್ರಕಾರ ಹಾಸ್ಯನಾಟಕ, 6 ರಿಂದ 7.30ರವರೆಗೆ ಮೈಸೂರು ಸಂಚಲನ ದೀಪಕ್ ತಂಡದಿಂದ ಕಂಚುಗನ್ನಡಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಸೆ. 28 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕವಿಗೋಷ್ಠಿ , ಮಧ್ಯಾಹ್ನ 2ರಿಂದ ಸಂಜೆ 4 ರವರೆಗೆ ಮೈಸೂರಿನ ನಿರಂತರ ಫೌಂಡೇಶನ್ ರವರಿಂದ ಸಾಯೋ ಆಟ ಸಾಮಾಜಿಕ ನಾಟಕ, ಸಂಜೆ 4ರಿಂದ 6ರವರೆಗೆ ಗುಂಡ್ಲುಪೇಟೆಯ ಬಿ.ಎಂ. ಸುರೇಶ್ ಮತ್ತು ತಂಡದಿಂದ ನಮ್ಮ ಗೌಡರು ಸಾಮಾಜಿಕ ನಾಟಕ, 6 ರಿಂದ 8ರವರೆಗೆ ಹನೂರಿನ ನಕ್ಷತ್ರ ಫೌಂಡೇಶನ್ ನಿಂದ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಸೆ. 29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೇಲಾಜಿಪುರದ ಗುರುಮಲ್ಲೇಶ್ವರ ಕಲಾ ಸಂಘದಿಂದ ವಿಕ್ರಮರಾಜ ಪೌರಾಣಿಕ ನಾಟಕ, ಮಧ್ಯಾಹ್ನ 1ರಿಂದ 1.30ರವರೆಗೆ ಎಂ. ಶಿವಶಂಕರ್ ಮತ್ತು ತಂಡದವರಿಂದ ರಂಗಗೀತೆ ಗಾಯನ, 1.30ರಿಂದ 4.30ರವರೆಗೆ ಉಮ್ಮತ್ತೂರು ಬಸವರಾಜು ಮತ್ತು ಗೆಳೆಯರ ಬಳಗದಿಂದ ಭಕ್ತ ಪ್ರಹ್ಲಾದ ನಾಟಕ, ಸಂಜೆ 4.30 ರಿಂದ 5.30ರವರೆಗೆ ಶಿವನಂಜಯ್ಯ, ಟಿ.ಎಸ್. ಶಿವಕುಮಾರ್, ವಿ. ಮಹದೇವಯ್ಯ (ಆಪು ಮಾಸ್ಟರ್), ವೆಂಕಟರಮಣಸ್ವಾಮಿ, ರಾಮಣ್ಣ, ಮನೋಜ್ ಮಸು ತಂಡದಿಂದ ರಂಗಗೀತೆ ಗಾಯನ, 5.30 ರಿಂದ 8ರವರೆಗೆ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಚಾಮರಾಜನಗರದ ಘಟಂ ಕೃಷ್ಣ ತಂಡದಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.
ಸೆ.30ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಶ್ರೀ ಮಲೆಮಹದೇಶ್ವರ ಕಲಾ ಸಂಘದ ಗುರುಶಾಂತಪ್ಪ ಮತ್ತು ತಂಡದವರಿಂದ ಶಿವಶರಣ ಹರಳಯ್ಯ ನಾಟಕ, 1.30 ರಿಂದ 2 ರವರೆಗೆ ಮಂಗಲದ ಮಲ್ಲಿಕಾರ್ಜುನಸ್ವಾಮಿ ಮತ್ತು ತಂಡದವರಿಂದ ರಂಗಗೀತೆ ಗಾಯನ, ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಕೃಪಾಪೋಷಿತ ನಾಟಕ ಮಂಡಳಿ ರಮೇಶ್ ಮತ್ತು ತಂಡದವರಿಂದ ಚಂದ್ರಮನ ಪರಿಭವ ನಾಟಕ ಪ್ರದರ್ಶನ ನಡೆಯಲಿದೆ.
ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ…
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯದ ಮೊದಲ ಇನ್ನಿಂಗ್ಸ್ ಆರಂಭಿಸಿದ ಕಂಗನಾ ರಣಾವತ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ…
ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ಆಯೋಜಿಸಿರುವ ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಸಿಸಿಟಿವಿಯಲ್ಲಿ ಆಘಾತಕಾರಿ ಘಟನೆಯೊಂದು ಸೆರೆಯಾಗಿದ್ದು ಬೀದಿಯಲ್ಲಿ ಬಾಲಕಿಯರ ಗುಂಪಿನ ಮೇಲೆ ಎರಡು ಹಸುಗಳು ಬಿದ್ದು ಉರುಳಾಡುವುದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ,…
ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…
ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…