News Karnataka Kannada
Monday, May 06 2024
ಚಾಮರಾಜನಗರ

ಹರಕೆ ತೀರಿಸಿದ ಎಂಎಲ್ ಸಿ ಸಿ.ಎನ್.ಮಂಜೇಗೌಡ

Cn Manjegowda
Photo Credit : News Kannada

ಕೃಷ್ಣರಾಜಪೇಟೆ: ಮೈಸೂರು ಚಾಮರಾಜನಗರ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಭಾರೀ ಪೈಪೋಟಿ ನಡುವೆ ಗೆಲುವು ಸಾಧಿಸಿದ ಜೆಡಿಎಸ್‍ ನ ಸಿ.ಎನ್.ಮಂಜೇಗೌಡರವರು  ತಾಲೂಕಿನ ಪ್ರಸಿದ್ಧ ಭೂವರಹನಾಥ ದೇವಾಲಯಕ್ಕೆ ಕುಟುಂಬ ಸಮೇತವಾಗಿ ಆಗಮಿಸಿ ದೇವರಿಗೆ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ.

ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ನಾನು ಚುನಾವಣೆ ಸಂದರ್ಭದಲ್ಲಿ ಭೂವರಹನಾಥ ಸ್ವಾಮಿ ದೇವಾಲಯಕ್ಕೆ ಬಂದು ದೇವರ ಆಶೀರ್ವಾದವನ್ನು ಪಡೆದು ಚುನಾವಣೆಯಲ್ಲಿ ನಾನು ವಿಶೇಷ ಪೂಜೆ ಮಾಡಿಸಿ 101 ತೆಂಗಿನಕಾಯಿಯನ್ನು ಒಡೆದು ಹರಕೆಯನ್ನು ಅರ್ಪಿಸುತ್ತೇನೆ ಎಂದು ಹರಕೆ ಮಾಡಿಕೊಂಡಿದ್ದೆನು. ನಮ್ಮ ಕ್ಷೇತ್ರದ ಜನರು ನನ್ನನ್ನು ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದಾರೆ. ಹಾಗಾಗಿ ಕುಟುಂಬ ಸಮೇತರಾಗಿ ಆಗಮಿಸಿ ಹರಕೆಯನ್ನು ತೀರಿಸಿದ್ದಾಗಿ ತಿಳಿಸಿದ್ದಾರೆ.

ಭೂವರಹನಾಥ ದೇವಾಲಯದ ಟ್ರಸ್ಟಿ ಶ್ರೀನಿವಾಸ್ ರಾಘವನ್  ಮಾತನಾಡಿ ಭೂಮಿಯ ಮೇಲೆ ರಾಹು ದೋಷ ಅತ್ಯಂತ ಪ್ರಮುಖವಾಗಿದ್ದು ಅದಕ್ಕೆ ಭೂವರಹನಾಥ ಸ್ವಾಮಿ ಅಧಿಪತಿ ಹಾಗಾಗಿ ಭಕ್ತರು ದೇವರಲ್ಲಿ ಏನೇ ಬೇಡಿಕೊಂಡರು ದೇವರು ಅವರ ಕಷ್ಟಗಳಿಗೆ ಪರ್ಯಾಯವನ್ನು ಕೊಡುತ್ತಾನೆ. ಉದಾಹರಣೆಗೆ ಭೂಮಿ ಖರೀದಿಸಲು ಮದುವೆ ವಿಚಾರವಾಗಿ ಕೋರ್ಟಿನ ವಿಚಾರ ಇತರ ಎಲ್ಲಾ ಕಷ್ಟಗಳಿಗೂ ನಮ್ಮ ದೇವಾಲಯದಲ್ಲಿ ಪ್ರಾರ್ಥಿಸಿಕೊಂಡರೆ ಭಕ್ತಾಧಿಗಳ ಇಷ್ಟಾರ್ಥ ಸಿದ್ಧಿ ಲಭಿಸುವುದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮ ವಿಜೇಂದ್ರ, ಭರತ್ ಗೌಡ, ಮುರುಳಿ ದೇವನೂರು, ಶ್ರೀಕಾಂತ್ ಬೆಂಗಳೂರು, ಶ್ರೀನಿವಾಸ್, ಸತೀಶ್ ಕಲ್ಲಹಳ್ಳಿ, ರಮೇಶ್ ಮಂಡ್ಯ, ಭಕ್ತಾಧಿಗಳು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು