ಕೃಷ್ಣರಾಜಪೇಟೆ: ಮೈಸೂರು ಚಾಮರಾಜನಗರ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಭಾರೀ ಪೈಪೋಟಿ ನಡುವೆ ಗೆಲುವು ಸಾಧಿಸಿದ ಜೆಡಿಎಸ್ ನ ಸಿ.ಎನ್.ಮಂಜೇಗೌಡರವರು ತಾಲೂಕಿನ ಪ್ರಸಿದ್ಧ ಭೂವರಹನಾಥ ದೇವಾಲಯಕ್ಕೆ ಕುಟುಂಬ ಸಮೇತವಾಗಿ ಆಗಮಿಸಿ ದೇವರಿಗೆ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ.
ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ನಾನು ಚುನಾವಣೆ ಸಂದರ್ಭದಲ್ಲಿ ಭೂವರಹನಾಥ ಸ್ವಾಮಿ ದೇವಾಲಯಕ್ಕೆ ಬಂದು ದೇವರ ಆಶೀರ್ವಾದವನ್ನು ಪಡೆದು ಚುನಾವಣೆಯಲ್ಲಿ ನಾನು ವಿಶೇಷ ಪೂಜೆ ಮಾಡಿಸಿ 101 ತೆಂಗಿನಕಾಯಿಯನ್ನು ಒಡೆದು ಹರಕೆಯನ್ನು ಅರ್ಪಿಸುತ್ತೇನೆ ಎಂದು ಹರಕೆ ಮಾಡಿಕೊಂಡಿದ್ದೆನು. ನಮ್ಮ ಕ್ಷೇತ್ರದ ಜನರು ನನ್ನನ್ನು ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದಾರೆ. ಹಾಗಾಗಿ ಕುಟುಂಬ ಸಮೇತರಾಗಿ ಆಗಮಿಸಿ ಹರಕೆಯನ್ನು ತೀರಿಸಿದ್ದಾಗಿ ತಿಳಿಸಿದ್ದಾರೆ.
ಭೂವರಹನಾಥ ದೇವಾಲಯದ ಟ್ರಸ್ಟಿ ಶ್ರೀನಿವಾಸ್ ರಾಘವನ್ ಮಾತನಾಡಿ ಭೂಮಿಯ ಮೇಲೆ ರಾಹು ದೋಷ ಅತ್ಯಂತ ಪ್ರಮುಖವಾಗಿದ್ದು ಅದಕ್ಕೆ ಭೂವರಹನಾಥ ಸ್ವಾಮಿ ಅಧಿಪತಿ ಹಾಗಾಗಿ ಭಕ್ತರು ದೇವರಲ್ಲಿ ಏನೇ ಬೇಡಿಕೊಂಡರು ದೇವರು ಅವರ ಕಷ್ಟಗಳಿಗೆ ಪರ್ಯಾಯವನ್ನು ಕೊಡುತ್ತಾನೆ. ಉದಾಹರಣೆಗೆ ಭೂಮಿ ಖರೀದಿಸಲು ಮದುವೆ ವಿಚಾರವಾಗಿ ಕೋರ್ಟಿನ ವಿಚಾರ ಇತರ ಎಲ್ಲಾ ಕಷ್ಟಗಳಿಗೂ ನಮ್ಮ ದೇವಾಲಯದಲ್ಲಿ ಪ್ರಾರ್ಥಿಸಿಕೊಂಡರೆ ಭಕ್ತಾಧಿಗಳ ಇಷ್ಟಾರ್ಥ ಸಿದ್ಧಿ ಲಭಿಸುವುದು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮ ವಿಜೇಂದ್ರ, ಭರತ್ ಗೌಡ, ಮುರುಳಿ ದೇವನೂರು, ಶ್ರೀಕಾಂತ್ ಬೆಂಗಳೂರು, ಶ್ರೀನಿವಾಸ್, ಸತೀಶ್ ಕಲ್ಲಹಳ್ಳಿ, ರಮೇಶ್ ಮಂಡ್ಯ, ಭಕ್ತಾಧಿಗಳು ಇದ್ದರು.