ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದ ಮಾಯಕಾರ ಮಾದಪ್ಪ 34 ದಿನಗಳಲ್ಲಿ ಮತ್ತೆ ಎರಡು ಕೋಟಿ ಒಡೆಯನಾಗಿ ಸಾಹುಕಾರ ಮಾದಪ್ಪನಾಗಿದ್ದಾನೆ.
ಮಹದೇಶ್ವರ ಬೆಟ್ಟದ ಹುಂಡಿ ಏಣಿಕೆ ಕಾರ್ಯ ಬಿಗಿ ಬಂದೋಬಸ್ತ್ನಲ್ಲಿ ತಡರಾತ್ರಿ ತನಕ ನಡೆಯಿತು. ಇದೇ ವೇಳೆ 34ದಿನಗಳಲ್ಲಿ 2 ಕೋಟಿ 57 ಲಕ್ಷದ 25 ಸಾವಿರ 859 ರೂಪಾಯಿಗಳ ಸಂಗ್ರಹವಾಗಿದೆ.
ಕಾಣಿಕೆ ಹಣದೊಂದಿಗೆ 127 ಗ್ರಾಂ ಚಿನ್ನಾಭರಣ, 3 ಕೆಜಿ 447 ಗ್ರಾಂ ಬೆಳ್ಳಿ ಪದಾರ್ಥಗಳ ಸಂಗ್ರಹವಾಗಿದೆ. ನಿತ್ಯದ ವಿವಿಧ ಸೇವೆಗಳನ್ನು ಹೊರತುಪಡಿಸಿ ಹುಂಡಿಯಲ್ಲೇ ಎರಡೂವರೆ ಕೋಟಿ ರೂ. ಆದಾಯ ಬಂದಿದೆ.
ಕೊರೊನಾ ಬಳಿಕ ಭಕ್ತಸಾಗರವೇ ಬೆಟ್ಟಕ್ಕೆ ಹರಿದು ಬರುತ್ತಿದೆ. ವಾರಾಂತ್ಯ ಹಾಗೂ ಸೋಮವಾರದಂದು ಚಿನ್ನದ ರಥ ಸೇವೆ ಮಾಡಲು ಕಿಕ್ಕಿರಿದು ಭಕ್ತರು ಸೇರುತ್ತಿದ್ದಾರೆ ಎಂದು ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.