News Karnataka Kannada
Friday, May 03 2024
ಚಾಮರಾಜನಗರ

ಚಾಮರಾಜನಗರ: ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸಿದ್ದ ಆರೋಪಿಗಳು ಅಂದರ್

Fraud
Photo Credit : News Kannada

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆಯ ವಾಸಿಯೊಬ್ಬರಿಗೆ ದೂರವಾಣಿ ಮುಖಾಂತರ ತಮ್ಮನ್ನು ರಘು ಮತ್ತು ಕೃಷ್ಣಪ್ಪ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಗಳು ನಮ್ಮ ಗ್ರಾಮದ ಪರಿಚಯಸ್ಥರೊಬ್ಬರು ತಮ್ಮ ಮನೆಯ ಪಾಯವನ್ನು ತೆಗೆಯುವ ಸಮಯದಲ್ಲಿ ಬಂಗಾರದ ನಾಣ್ಯಗಳು ದೊರೆತಿದ್ದು, ಅವರಿಗೆ ತುರ್ತು ಹಣದ ಅವಶ್ಯಕತೆ ಇರುವುದರಿಂದ ನಿಮಗೆ ಕಡಿಮೆ ಬೆಲೆಗೆ ಆ ಬಂಗಾರದ ನಾಣ್ಯಗಳನ್ನು ಕೊಡಿಸುತ್ತೇನೆಂದು ನಂಬಿಸಿದ್ದಾರೆ.

ಜ.4ರಂದು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆನವಟ್ಟಿ ಬಸ್ ಸ್ಟ್ಯಾಂಡ್ ಹತ್ತಿರ ಬನ್ನಿ ನಿಮಗೆ ಬಂಗಾರ ನಾಣ್ಯಗಳನ್ನು ಕೊಡುತ್ತೇವೆಂದು ಕರೆದು ಬಂಗಾರದ ನಾಣ್ಯಗಳೆಂದು ಹೇಳಿ ½ ತೂಕದ ನಾಣ್ಯಗಳನ್ನು ಕೊಟ್ಟು ರೂ 5,00,000/- ಗಳನ್ನು ಪಡೆದುಕೊಂಡಿರುತ್ತಾರೆ.

ನಂತರ ಸದರಿ ನಾಣ್ಯಗಳನ್ನು ಪರೀಕ್ಷೆ ಮಾಡಿಸಿದಾಗ ಅವರು ನಮಗೆ ನಕಲಿ ನಾಣ್ಯಗಳನ್ನು ನೀಡಿ ಮೋಸ ಮಾಡಿರುವುದು ತಿಳಿದು ಬಂದಿರುತ್ತದೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆಃ-0006/2022 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪಿಎಸ್ಐ ಆನವಟ್ಟಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಜ. 17ರಂದು ಪ್ರಕರಣದ ಆರೋಪಿಗಳಾದ ಕೆ ರಾಮಪ್ಪ, 44 ವರ್ಷ, ತಿಮ್ಲಾಪುರ ಗ್ರಾಮ, ಆನವಟ್ಟಿ ಮತ್ತು ತಿಮ್ಮಪ್ಪ, 65 ವರ್ಷ, ಬನ್ನೂರು ಗ್ರಾಮ ಶಿಕಾರಿಪುರರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ರೂ. 4,22,000/- ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು