ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಹೊಸೂರು ಗ್ರಾಮದ ಕುಂಚ ಕಲಾವಿದ ಮಧೂಸೂದನ್ ಗೆ ದೃಶ್ಯ ಬೆಳಕು ಪ್ರಶಸ್ತಿ ಲಭಿಸಿದೆ.
ಗುಲ್ಬರ್ಗದ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಯು ಆಯೋಜಿಸಿದ್ದ ರಾಷ್ಟ್ರ ಮಟ್ಟದ 9ನೇವಾರ್ಷಿಕ ಕಲಾ ಪ್ರದರ್ಶನಕ್ಕೆ ಚಾಮರಾಜ ನಗರ ತಾಲ್ಲೂಕಿನ ಮಂಗಲ ಹೊಸೂರು ಗ್ರಾಮದ ಯುವ ಕಲಾವಿದ ಮಧುಸೂದನ್ ಅವರ ಫಾಸ್ಟ್ ಅಂಡ್ ಅಪ್ಡೇಟ್ ಕಲಾಕೃತಿ ಆಯ್ಕೆ ಯಾಗಿದ್ದು, ದೃಶ್ಯಬೆಳಕು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ
ಈ ಕಲಾಕೃತಿ ಯು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಯ 50ನೇ ವಾರ್ಷಿಕ ಪ್ರದರ್ಶನಕ್ಕೂ ಆಯ್ಕೆ ಯಾಗಿ ಚಿತ್ರ ಕಲಾ ಪರಿಷತ್ ಬೆಂಗಳೂರು ಹಾಗೂ ಜೆ.ಜೆ ಸ್ಕೂಲ್ ಆಫ್ ಆರ್ಟ್, ಮುಂಬೈ ನಲ್ಲಿ ಪ್ರದರ್ಶನ ಕಂಡಿತ್ತು, ಮಧುಸೂಧನ್ ರವರು ಗುಲ್ಬರ್ಗದ ರಂಗಾಯಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸಿ ಸ್ವೀಕರಿಸಿದ್ದಾರೆ.
ಇವರಿಗೆ ಚಾಮರಾಜನಗರ ಜಿಲ್ಲೆಯ ಕಲಾವಿದರಾದ ದೇವ ಆರ್ಟ್ಸ್ ಮಹದೇವ, ಮಾಜಿ ಲಲಿತ ಕಲಾ ಅಕಾಡೆಮಿ ಸದಸ್ಯ ರಾಜಶೇಖರ್, ಕಲಾವಿದರಾದ ದುಂಡು ಮಹದೇವಸ್ವಾಮಿ, ರಾಚಪ್ಪಾಜಿ, ಶಿವಕುಮಾರ್ಸ್ವಾಮಿ ಮಹೇಶ್, ಇನ್ನಿತರ ಕಲಾವಿದರು ಅಭಿನಂದನೆ ಸಲ್ಲಿಸಿದ್ದಾರೆ.