ಮೈಸೂರು: ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ ವ್ಯಕ್ತಿ ಬಿದ್ದಿದ್ದರೂ ಲೆಕ್ಕಿಸದೆ ಚಾಲನೆ ಮಾಡಿ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನಲೆ ಆರೋಪಿಗೆ ಮೈಸೂರು ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ದಂಡ ತಪ್ಪಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಾಬು ಥಾಮಸ್ ಶಿಕ್ಷೆಗೆ ಗುರಿಯಾದ ಅಪರಾಧಿ. 2022 ರಂದು ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಹಳೇ ಧ್ವೇಷದ ಹಿನ್ನಲೆ ಚಂದ್ರಶೇಖರ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಬಾಬುಥಾಮಸ್ ನಂತರ ಕಾರನಿಂದ ಗುದ್ದಿದ್ದಾನೆ. ರಭಸಕ್ಕೆ ಚಂದ್ರಶೇಖರ್ ಕಾರಿನ ಬ್ಯಾನೆಟ್ ಮೇಲೆ ಬಿದ್ದಿದ್ದಾರೆ. ಹೀಗಿದ್ದೂ ಚಂದ್ರಶೇಖರ್ ನ ರಕ್ಷಿಸದೆ ಕೊಲೆ ಮಾಡುವ ಉದ್ದೇಶದಿಂದ ಬ್ಯಾನೆಟ್ ಮೇಲೆ ಬಿದ್ದಿದ್ದರೂ ಕಾರನ್ನ ಅಪಾಯಕಾರಿಯಾಗಿ ಚಾಲನೆ ಮಾಡಿ ಸುಮಾರು 800 ಮೀಟರ್ ದೂರಕ್ಕೆ ಎಳೆದೊಯ್ದು ಬೀಳಿಸಿದ್ದಾನೆ.

ಕೊಲೆ ಮಾಡುವ ದುರುದ್ದೇಶದಿಂದ ಕೃತ್ಯವೆಸಗಿದ ಬಾಬು ಥಾಮಸ್ ಮೇಲೆ ಸಬ್ ಇನ್ಸ್ಪೆಕ್ಟರ್ ಜೈಕೀರ್ತಿ ರವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಜೈಕೀರ್ತಿ ರವರು ನಡೆಸಿದ ತನಿಖೆಗೆ ಸಿಪಿಸಿ ಶಿವಣ್ಣ ಸಹಾಯಕರಾಗಿದ್ದರು. ಆರೋಪ ಸಾಬೀತಾದ ಹಿನ್ನಲೆ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯದೀಶರಾದ ಅನಂತ್.ಹೆಚ್ ರವರು ತೀರ್ಪನ್ನ ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಸುಧಾ ರವರು ವಾದ ಮಂಡಿಸಿದ್ದಾರೆ.