ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ದಸರಾ ಮೆರವಣಿಗೆ ವೇಳೆ ನಡೆಯಲಿದ್ದ ಭಾರೀ ಅನಾಹುತವೊಂದು ಮಾವುತರ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದ ಗೋಪಾಲಸ್ವಾಮಿ ಆನೆ ಬೆದರಿ ಜನರತ್ತ ತಿರುಗಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ ಅದೃಷ್ಟ ವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ದಸರ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿದ ಕೋರಿಕೆ ಮೇಲೆ ಸರ್ಕಾರ ಮೈಸೂರಿನಿಂದ ಗೋಪಾಲಸ್ವಾಮಿ ಮತ್ತು ಕಾವೇರಿ ಎಂಬ ಎರಡು ಆನೆಗಳನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಲಾಗಿತ್ತು. ದಸರಾ ಮೆರಣಿಗೆಗೆ ಶ್ರೀ ಆದಿ ಚುಂಚುನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ ಪುರ್ಷ್ಟಾನೆ ಮಾಡುವ ಸಂದರ್ಭದಲ್ಲಿ ಪಟಾಕಿ ಸಿಡಿಸಲಾಗಿದೆ. ಈ ವೇಳೆ ಶಬ್ದಕ್ಕೆ ಬೆದರಿದ ಗೋಪಾಲಸ್ವಾಮಿ ಆನೆ ಗಾಬರಿಯಿಂದ ಒಂದು ಸುತ್ತು ತಿರುಗಿ ಅಡ್ಡಾದಿಡ್ಡಿ ಓಡಲು ಮುಂದಾಗಿದೆ. ತಕ್ಷಣ ಅದರ ಮಾವುತ ಅದನ್ನು ತನ್ನ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಇದೇ ವೇಳೆ ಕಾವೇರಿ ಆನೆಯ ಮಾವುತ ಕೂಡ ಗೋಪಾಲಸ್ವಾಮಿಯನ್ನು ಸಮಾಧಾನಪಡಿಸಲು ಕೈಜೋಡಿಸಿದ ಮೇರೆಗೆ ಶಾಂತನಾಗಿದ್ದಾನೆ. ಬಳಿಕ ಜನರಿದ್ದ ಸ್ಥಳದಿಂದ ದೂರ ಕರೆದೊಯ್ದು ಸಮಾಧಾನಪಡಿಸಲಾಯಿತು. ಮಾವುತರ ಸಮಯ ಪ್ರಜ್ಙೆಯಿಂದ ದೊಡ್ಡ ಅನಾವುತ ತಪ್ಪಿದಂತಾಗಿದೆ. ನಂತರ ಆನೆಗಳಿಗೆ ಕಟ್ಟಿದ್ದ ಚಾಮುಂಡಿ ವಿಗ್ರಹ ಹಾಗೂ ಅಂಬಾರಿಯನ್ನು ತಕ್ಷಣ ಕೆಳಗಿಳಿಸಿ ಆನೆಗಳನ್ನು ಮೈಸೂರಿಗೆ ಸಾಗಿಸಲಾಯಿತು.
ಈ ಸಂದರ್ಭ ಜನರು ಜೀವಭಯದಿಂದ ಭಯಬೀತರಾಗಿ ದಿಕ್ಕಾಪಾಲಾಗಿ ಓಡಿದ ಪರಿಣಾಮ ನೂಕು ನುಗ್ಗಲು ಸಂಭವಿಸಿ ಕೆಲವರು ಹೆಂಗಸರು ಮಕ್ಕಳ ಮೇಲೆ ಬಿದ್ದರಿಂದ ಕೆಲವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದೆ.
ಇದಕ್ಕೂ ಮುನ್ನ ್ಲ ಮೂರು ದಿನಗಳ ದಸರಾ ಮಹೊತ್ಸವಕ್ಕೆ ಶ್ರೀ ಆದಿ ಚುಂಚುನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ ಪುರ್ಷ್ಟಾನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಬಾರಿ ಸರ್ಕಾರದ ಆದೇಶದ ಮೇರೆಗೆ ಶ್ರೀರಂಗಪಟ್ಟಣದಲ್ಲಿ ಎರಡು ಆನೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಳೆದ ಸಂಪ್ರದಾಯದಂತೆ ಈ ಬಾರಿ ಆನೆಗಳು ಅಂಬಾರಿಯನ್ನು ಹೊರಲು ಅರಣ್ಯ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದರು. ಆದರೂ ಜಿಲ್ಲಾ ಮಂತ್ರಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೇವಲ 1 ಕಿ.ಮೀ ಜಂಬೂ ಸವಾರಿಗೆ ಅವಕಾಶ ನೀಡಿದ್ದರು.
ಶಾಶ್ವತಿಕ್ರ್ರಿಯಾ ಸಮಿತಿಯ ಅಧ್ಯಕ್ಷ ಡಾ. ಭಾನುಪ್ರಕಾಶ್ಶರ್ಮ ಅವರ ನೇತೃತ್ವದ ವೈದಿಕ ತಂಡದಿಂದ ಕೂಷ್ಮಾಂಡಚೇಧನ ಪೂಜೆ, ಕದಳಿ ಪೂಜೆ, ಶಮಿ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ದಸರಾ ಮಹೋತ್ಸವದ ಅಧ್ಯಕ್ಷತೆಯನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ನಾರಾಯಣಗೌಡ, ಶಾಸಕರಾದ ಸುರೇಶ್ಗೌಡ ಹಾಗೂ ಅನ್ನದಾನಿ ಹಾಜರಿದ್ದರು.