News Karnataka Kannada
Monday, May 20 2024
ಮೈಸೂರು

 ಯುವತಿಯರಿಗೆ ವಂಚನೆ: ವಂಚಿಸಿದವನ ವಿರುದ್ಧ ದೂರು

Photo Credit :

 ಯುವತಿಯರಿಗೆ ವಂಚನೆ: ವಂಚಿಸಿದವನ ವಿರುದ್ಧ ದೂರು

ಮೈಸೂರು: ಯುವತಿಯರು, ಬಾಲಕಿಯರಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಅವರಿಂದ ಹಣ ಪಡೆದು ಕೆಲವು ಯುವತಿರೊಂದಿಗೆ ಅಸಭ್ಯವಾಗಿ ವರ್ತಿಸಿದ ವಂಚಿಸಿದ ವ್ಯಕ್ತಿಯ ವಿರುದ್ಧ ಯುವತಿಯರು, ಬಾಲಕಿಯರು ಮಹಿಳೆಯರು ಪ್ರತಿಭಟನೆ ನಡೆಸಿದರು.

ಚಾಮರಾಜ ಅಂಡರ್ ಫೀಟ್ ರಸ್ತೆಯ ಕಿಲ್ಲೆ ಮೊಹಲ್ಲಾದ ಗುರ್ಕಾರ್ ರೇವಣ್ಣ ರಸ್ತೆಯಲ್ಲಿ ವ್ಯಕ್ತಿ ಗಿರೀಶ್ ಎಂಬಾತ ಯುವತಿಯರು ಮತ್ತು ಕೆಲವು ಬಾಲಕಿಯರಿಗೆ ಧಾರವಾಹಿ ಮತ್ತು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ 50 ಸಾವಿರದಿಂದ ಲಕ್ಷದವರೆಗೂ ಹಣ ಪೀಕಿಸಿದ್ದ. ಧಾರವಾಹಿಗೆ ನಟಿಯರು ಬೇಕಾಗಿದ್ದಾರೆ. ಬಾಲನಟಿಯರು ಬೇಕಾಗಿದ್ದಾರೆಂದು ಈತ ಮೈಸೂರಿನ ಸ್ಥಳಿಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ. ಜಾಹೀರಾತು ನೋಡಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವ ಕೆಲವು ಯುವತಿಯರು ಈತನಿಗೆ ಹಣ ನೀಡಿದ್ದರು, ಅಷ್ಟೇ ಅಲ್ಲದೇ ಕೆಲವು ಯುವತಿಯರೊಂದಿಗೆ ಈತ ಅಸಭ್ಯವಾಗಿ ನಡೆದುಕೊಂಡಿದ್ದ. ಇನ್ನೇನು ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕೇಬಿಟ್ಟಿತು ಎಂದು ಕೆಲವರು ಹಣವನ್ನೂ ನೀಡಿದ್ದರು. ಇದೀಗ ಗಿರೀಶ್ ಎಂಬಾತ ರಾತ್ರೋ ರಾತ್ರಿ ತನ್ನ ಕಛೇರಿ ಬಂದ್ ಮಾಡಿ ಪರಾರಿಯಾಗಿದ್ದಾನೆ. ಇಂದು ಆತನಿಂದ ಮೋಸ ಹೋದವರು ಕಚೇರಿ ಎದುರು ಬಂದು ಪ್ರತಿಭಟನೆ ನಡೆಸಿದರಲ್ಲದೇ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಪೊಲೀಸ್ ಡ್ರೆಸ್ ನಲ್ಲಿಯೂ ಕಾಣಿಸಿಕೊಂಡಿದ್ದ ಈತ ತಾನೇ ಪೊಲೀಸ್ ಎಂದು ಫೋಸು ಕೊಡುತ್ತಿದ್ದ ಎನ್ನಲಾಗಿದೆ. ಈತನ ನಂಬರ್ ಗೆ ಕರೆ ಮಾಡಿದರೆ ನಾಟ್ ರೀಚೆಬಲ್ ಬರುತ್ತಿದ್ದು, ಪೊಲೀಸರು ಈ ವಂಚಕನಿಗಾಗಿ ಬಲೆ ಬೀಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು