ಮೈಸೂರು: ಯುವತಿಯರು, ಬಾಲಕಿಯರಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಅವರಿಂದ ಹಣ ಪಡೆದು ಕೆಲವು ಯುವತಿರೊಂದಿಗೆ ಅಸಭ್ಯವಾಗಿ ವರ್ತಿಸಿದ ವಂಚಿಸಿದ ವ್ಯಕ್ತಿಯ ವಿರುದ್ಧ ಯುವತಿಯರು, ಬಾಲಕಿಯರು ಮಹಿಳೆಯರು ಪ್ರತಿಭಟನೆ ನಡೆಸಿದರು.
ಚಾಮರಾಜ ಅಂಡರ್ ಫೀಟ್ ರಸ್ತೆಯ ಕಿಲ್ಲೆ ಮೊಹಲ್ಲಾದ ಗುರ್ಕಾರ್ ರೇವಣ್ಣ ರಸ್ತೆಯಲ್ಲಿ ವ್ಯಕ್ತಿ ಗಿರೀಶ್ ಎಂಬಾತ ಯುವತಿಯರು ಮತ್ತು ಕೆಲವು ಬಾಲಕಿಯರಿಗೆ ಧಾರವಾಹಿ ಮತ್ತು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ 50 ಸಾವಿರದಿಂದ ಲಕ್ಷದವರೆಗೂ ಹಣ ಪೀಕಿಸಿದ್ದ. ಧಾರವಾಹಿಗೆ ನಟಿಯರು ಬೇಕಾಗಿದ್ದಾರೆ. ಬಾಲನಟಿಯರು ಬೇಕಾಗಿದ್ದಾರೆಂದು ಈತ ಮೈಸೂರಿನ ಸ್ಥಳಿಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ. ಜಾಹೀರಾತು ನೋಡಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವ ಕೆಲವು ಯುವತಿಯರು ಈತನಿಗೆ ಹಣ ನೀಡಿದ್ದರು, ಅಷ್ಟೇ ಅಲ್ಲದೇ ಕೆಲವು ಯುವತಿಯರೊಂದಿಗೆ ಈತ ಅಸಭ್ಯವಾಗಿ ನಡೆದುಕೊಂಡಿದ್ದ. ಇನ್ನೇನು ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕೇಬಿಟ್ಟಿತು ಎಂದು ಕೆಲವರು ಹಣವನ್ನೂ ನೀಡಿದ್ದರು. ಇದೀಗ ಗಿರೀಶ್ ಎಂಬಾತ ರಾತ್ರೋ ರಾತ್ರಿ ತನ್ನ ಕಛೇರಿ ಬಂದ್ ಮಾಡಿ ಪರಾರಿಯಾಗಿದ್ದಾನೆ. ಇಂದು ಆತನಿಂದ ಮೋಸ ಹೋದವರು ಕಚೇರಿ ಎದುರು ಬಂದು ಪ್ರತಿಭಟನೆ ನಡೆಸಿದರಲ್ಲದೇ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಪೊಲೀಸ್ ಡ್ರೆಸ್ ನಲ್ಲಿಯೂ ಕಾಣಿಸಿಕೊಂಡಿದ್ದ ಈತ ತಾನೇ ಪೊಲೀಸ್ ಎಂದು ಫೋಸು ಕೊಡುತ್ತಿದ್ದ ಎನ್ನಲಾಗಿದೆ. ಈತನ ನಂಬರ್ ಗೆ ಕರೆ ಮಾಡಿದರೆ ನಾಟ್ ರೀಚೆಬಲ್ ಬರುತ್ತಿದ್ದು, ಪೊಲೀಸರು ಈ ವಂಚಕನಿಗಾಗಿ ಬಲೆ ಬೀಸಿದ್ದಾರೆ.