Categories: ಮೈಸೂರು

ಮೈಸೂರು ದಸರಾ ಜಂಬೂಸವಾರಿಯ ಸೂತ್ರಧಾರಿಗಳು..!

ಮೈಸೂರು: ಮೈಸೂರು ದಸರಾದಲ್ಲಿ ಗಜಪಡೆಯದ್ದೇ ಕಾರುಬಾರು.. ಗಜಪಡೆಯಿಲ್ಲದ ದಸರಾವನ್ನು ಯಾರಿಂದಲೂ  ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಗಜಪಡೆ ಮೈಸೂರು ಅರಮನೆಗೆ ಪ್ರವೇಶ ಪಡೆದ ದಿನದಿಂದಲೇ ದಸರಾಕ್ಕೆ ಕಳೆ ಬರುತ್ತದೆ.

ಸೆ.13ರಂದು ನಾಗರಹೊಳೆಯ ವೀರನಹೊಸಳ್ಳಿಯಲ್ಲಿ ಗಜಪಯಣ ನಡೆಯಲಿದ್ದು, ಈ ಬಾರಿ ಗಜಪಯಣ ಸರಳವಾಗಿ  ನಡೆಯಲಿದೆ. ಅಂದೇ ಮೈಸೂರಿಗೆ ಆಗಮಿಸಲಿರುವ ಗಜಪಡೆ ನಗರದ ಅರಣ್ಯಭವನದಲ್ಲಿ ಬೀಡು ಬಿಡಲಿದೆ. ಆ ನಂತರ ಸೆಪ್ಟೆಂಬರ್ 16 ರಂದು ಮೈಸೂರು ಅರಮನೆಗೆ ಪ್ರವೇಶ ಪಡೆಯಲಿದೆ.

ಇನ್ನು ಈ ಬಾರಿ ಎಂಟು ಆನೆಗಳು ವಿವಿಧ ಆನೆಶಿಬಿರಗಳಿಂದ ಜಂಬೂಸವಾರಿಗೆ ಬರುತ್ತಿದ್ದು ಅವುಗಳ ಬಗ್ಗೆ ನೋಡುವುದಾದರೆ, ಕಳೆದ ವರ್ಷ ಅಂಬಾರಿ ಹೊತ್ತ ಅಭಿಮನ್ಯು ಈ ಬಾರಿಯೂ ಅಂಬಾರಿ ಹೊರಲಿದ್ದು ಆತನ ಜತೆಗೆ ಇನ್ನು ಏಳು ಆನೆಗಳು ಪಾಲ್ಗೊಂಡು ಜಂಬೂಸವಾರಿಗೆ ಮೆರಗು ನೀಡಲಿವೆ. ಹಾಗಾದರೆ ಈ ಬಾರಿ ಅಭಿಮನ್ಯು ಜತೆ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿರುವ ಗಜಪಡೆಯಲ್ಲಿ ಅಶ್ವತ್ಥಾಮ ಹೊಸಬನಾಗಿದ್ದಾನೆ. ಉಳಿದಂತೆ ಗೋಪಾಲಸ್ವಾಮಿ, ವಿಕ್ರಮ, ಕಾವೇರಿ, ಚೈತ್ರ, ಲಕ್ಷ್ಮಿ, ಧನಂಜಯ ಇದ್ದಾರೆ.

ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬಗ್ಗೆ ಹೇಳುವುದಾದರೆ, 56ವರ್ಷ ಪ್ರಾಯದ  ಈತ, ಕೂಬಿಂಗ್ ಸ್ಪೆಷಲಿಸ್ಟ್ ಆಗಿದ್ದು, ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈತನನ್ನು 1970 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೆಶದಲ್ಲಿ ಸೆರೆ ಹಿಡಿಯಲಾಗಿದೆ. ಕಾಡಾನೆ, ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಹಾಗೂ ಆನೆ ಪಳಗಿಸುವುದರಲ್ಲಿ ನಿಸ್ಸೀಮನಾಗಿರುವ ಈತ ಇದುವರೆಗೆ 150ಕ್ಕೂ ಹೆಚ್ಚು ಕಾಡಾನೆ ಹಾಗೂ 50 ಹುಲಿಗಳನ್ನು ಸೆರೆ ಹಿಡಿಯುವಲ್ಲಿ ಸಹಕರಿಸಿರುವುದು ವಿಶೇಷವಾಗಿದೆ.  2.72 ಮೀ. ಎತ್ತರ, 3.51 ಮೀ. ಉದ್ದವಿದ್ದು 4770 ಕೆಜಿ ತೂಕವಿದ್ದಾನೆ. ಈತನಿಗೆ  ಮಾವುತನಾಗಿ ವಸಂತ, ಕಾವಡಿಯಾಗಿ ರಾಜು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಗಜಪಡೆಗೆ ಹೊಸಬನಾಗಿರುವ ಅಶ್ವತ್ಥಾಮ ನನ್ನು ಕಳೆದ ನಾಲ್ಕು ವರ್ಷಗಳ ಹಿಂದೆ  ಹಾಸನ ಜಿಲ್ಲೆಯ ಸಕಲೇಶಪುರ ಕಾಡಂಚಿನಲ್ಲಿ ಪುಂಡಾಟ ಮಾಡುತ್ತಿದ್ದಾಗ 2017ರಲ್ಲಿ ಸೆರೆಹಿಡಿಯಲಾಗಿದೆ. ಇದೀಗ ಮೊದಲ ಬಾರಿಗೆ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಈತನಿಗೆ  ದೊಡ್ಡಹರವೆ ಆನೆ ಶಿಬಿರದಲ್ಲಿ ತರಬೇತಿ ನೀಡಲಾಗಿದೆ. 34 ವರ್ಷ ಪ್ರಾಯದ ಈತ 2.85 ಮೀಟರ್ ಎತ್ತರ, 3.46 ಮೀಟರ್ ಉದ್ದ ಹೊಂದಿದ್ದು, 3630 ಕೆಜಿ ತೂಕ ಹೊಂದಿದ್ದಾನೆ. ಸಮತಟ್ಟಾದ ಬೆನ್ನು ಹೊಂದಿರುವ ಈತ  ಭವಿಷ್ಯದಲ್ಲಿ ಅಂಬಾರಿ ಹೊರುವ ಲಕ್ಷಣ ಹೊಂದಿದ್ದಾನೆ. ಸದ್ಯ ಈತನಿಗೆ ಮಾವುತ ಶಿವು ಹಾಗೂ ಕಾವಡಿಯಾಗಿ ಗಣೇಶ ಕೆಲಸ ಮಾಡುತ್ತಿದ್ದಾರೆ.

ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಗೋಪಾಲಸ್ವಾಮಿಗೆ 38 ವರ್ಷ ಪ್ರಾಯವಾಗಿದ್ದು 2.85 ಮೀ. ಎತ್ತರ ಹಾಗೂ 3.42 ಮೀಟರ್ ಉದ್ದವಿರುವ ಮತ್ತು 4420 ಕೆ.ಜಿ. ತೂಕವಿದೆ. ಇದನ್ನು 2009ರಲ್ಲಿ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆ ಹಿಡಿಯಲಾಯಿತು. ಕಾಡಾನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಈತ 2012 ರಿಂದ  ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾನೆ. ಈತನಿಗೆ ಮಾವುತನಾಗಿ ಜೆ.ಡಿ. ಮಂಜು. ಕಾವಡಿಯಾಗಿ ಸೃಜನ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ದುಬಾರೆ ಆನೆ ಶಿಬಿರದ ಕಾವೇರಿಗೆ 44 ವರ್ಷ ಪ್ರಾಯ. ಕಳೆದ 9 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದು, 2.60 ಮೀ ಎತ್ತರ ಹಾಗೂ 3.32 ಉದ್ದ, 3220 ಕೆಜಿ ತೂಕವಿದೆ. 2009ರಲ್ಲಿ ಸೋಮವಾರಪೇಟೆಯ ಆಡಿನಾಡೂರು ಅರಣ್ಯದಲ್ಲಿ ಸೆರೆ ಹಿಡಿಯಲಾಗಿದೆ. ಮಾವುತನಾಗಿ ಡೋಬಿ ಮತ್ತು ಕಾವಡಿಯಾಗಿ  ರಂಜನ್  ಇದನ್ನು ನೋಡಿಕೊಳ್ಳುತ್ತಿದ್ದಾರೆ.

ರಾಮಾಪುರ ಆನೆ ಶಿಬಿರದಿಂದ ಬಂದಿರುವ ಇಪ್ಪತ್ತರ ಪ್ರಾಯದ ಲಕ್ಷ್ಮೀ ಈ ಹಿಂದೆ 2019ರಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಳು. ತಾಯಿಂದ ಬೇರ್ಪಟ್ಟು ಅನಾಥಳಾಗಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಆರೈಕೆ ಮಾಡಿದ್ದಾರೆ. ಆನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅನುಭವವಿದೆ. 2.23 ಮೀಟರ್ ಎತ್ತರ, 2.60 ಮೀಟರ್ ಉದ್ದ ಮತ್ತು 2540 ಕೆ.ಜಿ. ತೂಕ ಹೊಂದಿದ್ದಾಳೆ. ಮಾವುತನಾಗಿ ಚಂದ್ರ ಮತ್ತು ಕಾವಡಿಯಾಗಿ ಲವ ಕಾರ್ಯ ನಿರ್ವಹಿಸುತ್ತಿದ್ದಾರೆ.

ದುಬಾರೆ ಆನೆ ಶಿಬಿರದಿಂದ ಬಂದಿರುವ  ಧನಂಜಯ ಕಳೆದ ಮೂರು ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದು, 2013 ರಲ್ಲಿ ಹಾಸನ ಜಿಲ್ಲೆ ಯಸಳೂರಿನಲ್ಲಿ ಸೆರೆ ಹಿಡಿಯಲಾಗಿದೆ. 43 ವರ್ಷ ಪ್ರಾಯದ ಈತ 2.93 ಮೀಟರ್ ಎತ್ತರ, 3.84 ಮೀಟರ್ ಉದ್ದ ಮತ್ತು 4050 ಕೆ.ಜಿ. ತೂಕವಿದ್ದಾನೆ. ಭಾಸ್ಕರ್ ಮಾವುತನಾಗಿ ಮತ್ತು ಮಣಿ ಕಾವಡಿಯಾಗಿ ಕೆಲಸ ಮಾಡುತ್ತಿದ್ದು, ಕಾಡಾನೆ ಮತ್ತು ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಅನುಭವ ಹೊಂದಿದೆ.

ದುಬಾರೆ ಆನೆ ಶಿಬಿರದ ವಿಕ್ರಮನಿಗೆ ಈಗ 58 ವರ್ಷ ಪ್ರಾಯವಾಗಿದ್ದು, ಕಳೆದ 18 ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

Raksha Deshpande

Recent Posts

ಮಾಜಿ ಸಚಿವ ಹೆಚ್​.ಡಿ ರೇವಣ್ಣಗೆ ಬಿಗ್ ರಿಲೀಫ್

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಮಧ್ಯಂತರ ಜಾಮೀನು ಪಡೆದು ಹೊರಗಿದ್ದ…

15 mins ago

ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದ ರೈತನಿಗೆ ವಂಚಿಸಿದ ಅಪರಿಚಿತ

ಜಿಲ್ಲೆಯ ಹನೂರು ಪಟ್ಟಣದ ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದು ಕೇಳಿದ ರೈತನಿಗೆ ಕೀಡಿಗೇಡಿಯೋರ್ವ ವಂಚಿಸಿ ಹಣ ಲಪಾಟಿಸಿರುವ ಘಟನೆ…

17 mins ago

ಅಕ್ರಮ ಕಲ್ಲುಕೋರೆ : ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ

ಅಕ್ರಮ ಕಲ್ಲುಕೋರೆ ದಾಳಿ ನೆಪದಲ್ಲಿ ಬಿಜೆಪಿ ಯುವ ಮುಖಂಡನ ಬಂಧಸಿದ ಹಿನ್ನಲೆ, ಬೆಳ್ತಂಗಡಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ…

18 mins ago

ನಿರ್ಮಾಪಕ ನನಗೆ ಬೆದರಿಕೆ ಹಾಕುತ್ತಿದ್ದಾರೆ : ʻಹೆಡ್‌ಬುಷ್‌́ ನಟಿ ಗಂಭೀರ ಆರೋಪ

ಪಂಜಾಬಿ ಬ್ಯೂಟಿ ಪಾಯಲ್‌ ರಜಪೂತ್‌ ಅವರು ನಿರ್ಮಾಪಕರ ವಿರುದ್ಧ ಹೆಡ್‌ಬುಷ್‌ ನಟಿ ಬೆದರಿಕೆ ಹಾಕುತ್ತಿದ್ದಾರೆಂದು ಹೆಡ್‌ಬುಷ್‌ ನಟಿ ಆರೋಪಿಸುತ್ತಿದ್ದಾರೆ. RX…

2 hours ago

ಟಿಪ್ಪರ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…

2 hours ago

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ…

2 hours ago