ಮೈಸೂರು: ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಪ್ರವೇಶ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಕೃಷ್ಣರಾಜ ಯುವ ಬಳಗದ ವತಿಯಿಂದ ಅರಮನೆ ಸುತ್ತಮುತ್ತ ಆಟೋ ಚಾಲಕರು ಹಾಗೂ ವ್ಯಾಪಾರಸ್ಥರು, ಟಾಂಗಾ ಗಾಡಿ ಅವರಿಂದ ಸಹಿ ಸಂಗ್ರಹ ಪಡೆಯಲಾಯಿತು.
ಸಾರ್ವಜನಿಕರಿಂದ ಪಡೆದ ಸಹಿ ಸಂಗ್ರಹವನ್ನು ಮುಂದಿನ ದಿನಗಳಲ್ಲಿ ನಮ್ಮ ಕೃಷ್ಣರಾಜ ಯುವ ಬಳಗದ ವತಿಯಿಂದ ಅರಮನೆ ಆಡಳಿತ ಮಂಡಳಿ ಅವರಿಗೆ ಹಸ್ತಾಂತರಿಸಿ ಅರಮನೆ ಪ್ರವೇಶ ದರ ಯಥಾಸ್ಥಿತಿ ಕಾಪಾಡಲು ಮನವಿ ಮಾಡುತ್ತೇವೆ ಎಂದು ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ತಿಳಿಸಿದರು
ಕೊರೋನಾ ಹೊಡೆತಕ್ಕೆ ಸಿಲುಕಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಅರಮನೆ ಪ್ರವೇಶ ದರ ಹೆಚ್ಚಳದಿಂದ ಮತ್ತೆ ಹೊಡೆತ ಬೀಳಲಿದೆ. ಸಂಕಷ್ಟ ಸಂದರ್ಭದಲ್ಲಿ ದರ ಹೆಚ್ಚಳ ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು , ಭಾರೀ ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮ ಈಗಷ್ಟೇ ನಿಧಾನವಾಗಿ ಹೊರಗೆ ಬಂದು .ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಳದಿಂದ ಪ್ರವಾಸಿಗರನ್ನೇ ನಂಬಿ ನೂರಾರು ಕುಟುಂಬ ಜೀವನ ಮಾಡುತ್ತಿದ್ದಾರೆ ,ಈಗಾಗಲೇ ಕೋವಿಡ್ ನಿಂದ 2 ವರ್ಷದಿಂದ ಪ್ರವಾಸಿಗರ ಬರದೆ ವ್ಯಾಪಾರಸ್ಥರಿಗೆ ಜೀವನ ಮಾಡಲು ಬಹಳ ಸಂಕಷ್ಟದಲ್ಲಿದ್ದಾರೆ,ಈ ಬಾರಿ ದಸರಾ ದಲ್ಲಾದರೂ ವ್ಯಾಪಾರದಲ್ಲಿ ಚೇತರಿಸಿಕೊಳ್ಳಬಹುದು ಎಂದು ಆಸೆಯನ್ನು ವ್ಯಾಪಾರಸ್ಥರಿದ್ದಾರೆ. ಇಂತಹ ಸಂದರ್ಭದಲ್ಲಿ ಅರಮನೆ ಪ್ರವೇಶ ದರ ಹೆಚ್ಚಳ ಮಾಡಿರುವುದು ಬೇಸರದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ತೀರ್ಥಕುಮಾರ್, ಮಹೇಂದರ್ ಶೈವಾ, ಶಿವಶಂಕರ್, ಮಹದೇವ್ ಪ್ರಸಾದ್, ಸ್ವಾಮಿ, ಹರೀಶ್ ನಾಯ್ಡು ಹಾಗೂ ಇನ್ನಿತರರು ಹಾಜರಿದ್ದರು