News Karnataka Kannada
Monday, April 29 2024
ಮೈಸೂರು

ನೌಕರರ ಸಮಸ್ಯೆ ಇತ್ಯರ್ಥಕ್ಕೆ ಸಂಘಟನೆ ಅಗತ್ಯ

Photo Credit :

ನೌಕರರ ಸಮಸ್ಯೆ ಇತ್ಯರ್ಥಕ್ಕೆ ಸಂಘಟನೆ ಅಗತ್ಯ

ಮೈಸೂರು: ಖಜಾನೆ ನೌಕರರ ಸಮಸ್ಯೆಗಳ ಇತ್ಯರ್ಥ ಪಡಿಸಲು ಸಂಘಟನೆಯ ಅಗತ್ಯವಿರುವುದರಿಂದ ಖಜಾನೆ ನೌಕರರ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಖಜಾನೆ ಜಂಟಿ ನಿರ್ದೇಶಕಿ ಯಶೋಧ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರ ಖಜಾನೆ ನೌಕರರ ಸಂಘದ ಮೈಸೂರು ಶಾಖೆಯನ್ನು  ದೀಪ ಬೆಳಗಿಸುವ ಮುಖಾಂತರ ಚಾಲನೆ ನೀಡಿ ಮಾತನಾಡಿದ ಅವರು, ನೌಕರರ ಸಮಸ್ಯೆಗಳು ಯಾವುದೇ ರೀತಿ ಇರಬಹುದು ಈ ಸಮಸ್ಯೆಯನ್ನು ಬಗೆಹರಿಸುವಂತ ಕೆಲಸ ಮಾಡಬೇಕು ನೌಕರರು ಕ್ಷೇಮಾಭಿವೃದ್ಧಿ ಬೆಳವಣಿಗೆಯಾಗಬೇಕು  ಖಜಾನೆ ನೌಕರರ ಆರೋಗ್ಯವನ್ನು ಕಾಪಾಡುವ ಜತೆಗೆ ಅವರ ಸಮಸ್ಯೆಗಳನ್ನು ಪರಿಹರಿಸುವ ಮುಖೇನ ಈ ನೌಕರ ಸಂಘ  ಅತ್ಯಮೂಲ್ಯ  ಸಂಘ ಮತ್ತೆ ಪುನರಾರಂಭವಾಗಿರುವುದು ನಮ್ಮೆಲ್ಲರಿಗೆ ಸಂತೋಷ ತರುವ ವಿಚಾರ ಎಂದು ಹೇಳಿದರು.

ಮೈಸೂರು ಜಿಲ್ಲಾ ಖಜಾನೆ ನೌಕರರ ಉಪಾಧ್ಯಕ್ಷ ಎನ್.ಕೆ.ಗಣೇಶ್ ಮಾತನಾಡಿ  ಸಂಘ ಎನ್ನುವುದು ಶುದ್ಧ ಭಾರತೀಯ ಇತಿಹಾಸ ಪರಂಪರೆಯಲ್ಲಿ ಕ್ರಿ.ಪೂ. 6ನೇ ಶತಮಾನದಲ್ಲಿ  ಭಗವಾನ್ ಬುದ್ಧರು ಪ್ರಯೋಗ ಮಾಡಿದ ಶಬ್ದವಾಗಿದ್ದು ಅದರ ಬಲ ಶಕ್ತಿ ಎನ್ನುವುದರ ಜೊತೆಗೆ ಶಿಸ್ತುಬದ್ಧ ಚಟುವಟಿಕೆಯಿಂದ ಕೂಡಿದ ಅನೇಕ ಧ್ಯೇಯೋದ್ದೇಶಗಳನ್ನು ಹಾಗೂ ಶೀಲತೆಯಿಂದ ಕೂಡಿದ ಒಂದುಗುಂಪನ್ನು  ಸಂಘ ಎಂದು ನಾವು  ಭಾವಿಸುತ್ತೇವೆ  ಈ ಎಲ್ಲಾ ಅಂಶಗಳನ್ನು ಒಳಗೊಂಡ  ನಮ್ಮ ಮೈಸೂರು ಖಜಾನೆ ನೌಕರರ ಸಂಘ  ರಾಜ್ಯಾಧ್ಯಕ್ಷರಾದ ಪಿ ಜಗದೀಶ್ ಅವರ ನಿರ್ದೇಶನದಂತೆ ಜಿಲ್ಲಾ ತಾಲ್ಲೂಕು ಘಟಕ ಮತ್ತು ತಾಲೂಕು ಪಂಚಾಯಿತಿ ಘಟಕ ನೊಳಗೊಂಡಂತೆ   ಸರ್ವ ಸದಸ್ಯರನ್ನು ಒಗ್ಗೂಡಿಸಿ  ರಾಜ್ಯಕ್ಕೆ ಒಂದು ಮಾದರಿ ಜಿಲ್ಲಾ ಸಂಘವಾಗಿ ರೂಪಿತವಾಗಿದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಖಜಾನೆ ನೌಕರರ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ  ನೌಕರರ ಕ್ಷೇಮಾಭಿವದ್ಧಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ  ಉಚಿತ ಆರೋಗ್ಯ ಎಂಬ ಶೀರ್ಷಿಕೆಯಡಿ ಕೆಲಸ ಮಾಡಲು ಇಚ್ಛಿಸಿದ್ದು  ಇದಕ್ಕೆ ಚಾಲನೆ ನೀಡುವ ಉದ್ದೇಶದಿಂದ  ಸಂಘಟನೆಯನ್ನು ಇನ್ನೂ ಬಲಶಾಲಿಯಾಗಿ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಖಜಾನೆಯ ಸಹಾಯಕ ನಿರ್ದೇಶಕರಾದ ಗಿರಿಜಮ್ಮ  ಕಾರ್ಯದರ್ಶಿ ಎಚ್.ಎಂ.ಗಣೇಶ್ ಹಾಗೂ ಪದಾಧಿಕಾರಿಗಳು, ನಿರ್ದೇಶಕರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು