ಮೈಸೂರು: ಸೂರು ಇಲ್ಲದವರಿಗೆ ಸೂರು ಕಟ್ಟಿಕೊಳ್ಳಲು ನಗರಾಭಿವೃದ್ದಿ ಪ್ರಾಧಿಕಾರ ನಿವೇಶನ ಹಂಚಿಕೆ ಮಾಡುತ್ತದೆ. ಆದರೆ ಈ ನಿವೇಶನ ಪಡೆಯಲು ಹಲವು ವಾಮಾಮಾರ್ಗಗಳ ಮೂಲಕ ನಿವೇಶನ ಪಡೆಯುವವರೇ ಹೆಚ್ಚುತಿರುವ ಈ ಕಾಲದಲ್ಲಿ ಇಂತಹವರಿಗೆ ಬ್ರೇಕ್ ಹಾಕಲು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಹಾಗಾದರೇ ಆ ಮಾಸ್ಟರ್ ಪ್ಲಾನ್ ಏನು ಎಂಬುದಕ್ಕೆ ಈ ನ್ಯೂಸ್ ಓದಿ.
ಮುಡಾ ನಿಯಮಾವಳಿ ಪ್ರಕಾರ ಕರ್ನಾಟಕದ ಯಾವುದೇ ಭಾಗವದವರಿಗೆ ಮುಡಾದಿಂದ ನಿವೇಶನ ಹಂಚಿಕೆ ಮಾಡಬಹುದಾಗಿದ್ದರೂ ಅವರು ಪ್ರಾಧಿಕಾರ, ಗೃಹ ಮಂಡಳಿ, ಖಾಸಗಿ ಬಡವಾಣೆಗಳಲ್ಲಿ ನಿವೇಶನ, ಮನೆ ಹೊಂದಿರುವಂತಿಲ್ಲ. ಆದರೆ ಹಲವು ಸಾರ್ವಜನಿಕರು ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಸರಕಾರದ ಯಾವುದೇ ಏಜೆನ್ಸಿ ಅಥವಾ ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಅಭಿವೃದ್ದಿ ಮಾಡಿದ ಖಾಸಗಿ ಬಡವಾಣೆಗಳಲ್ಲಿ ನಿವೇಶನ, ಮನೆ ಹೊಂದಿದ್ದರೂ ಮುಡಾ ನಿವೇಶನಕ್ಕೆ ಅರ್ಜಿ ಸಲ್ಲಿಸಿ ರಾಜಕೀಯ ಮುಖಂಡರ ಪ್ರಭಾವ ಬಳಸಿ ನಿವೇಶನವಿದ್ದರೂ ಮುಡಾದಿಂದ ನಿವೇಶನ ಪಡೆಯುತ್ತಿದ್ದರು. ಇದಕ್ಕೆ ಬ್ರೇಕ್ ಹಾಕಲು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಿ ಮಾಸ್ಟರ್ ಪ್ಲಾನ್ ಮಾಡಿದ್ದು ಮುಡಾದಿಂದ ಸೈಟ್ ಕೊಳ್ಳುವವರು ಕಡ್ಡಾಯವಾಗಿ ಆಧಾರ್ ಸಂಖ್ಯೆ ನೋಂದಣಿ ಮಾಡಿಸಿಕೊಳ್ಳಬೇಕಿದೆ.
ಆಧಾರ್ ಲಿಂಕ್ ಮೂಲಕ ನಿವೇಶನ ಆಕಾಂಕ್ಷಿಗಳ ದಾಖಲೆ ಪರಿಶೀಲಿಸಿ ಸ್ವಂತ ನಿವೇಶನ ಮನೆ ಹೊಂದಿದ್ದಲ್ಲಿ ಅಂಥವರಿಗೆ ನಿವೇಶನ ಹಂಚಿಕೆಯನ್ನು ಪ್ರಾಧಿಕಾರ ರದ್ದು ಮಾಡಲಿದೆ. ಲಲಿತಾದ್ರಿಪುರ ಹಾಗೂ ಆರ್ ಟಿ ನಗರ ನಿವೇಶನಕ್ಕೂ ಆಧಾರ್ ಕಾರ್ಡ್ ಕಡ್ಡಯಾ,
2011ರಲ್ಲಿ ನಿವೇಶನಕ್ಕಾಗಿ ಲಲಿತಾದ್ರಿ ನಗರ(ಉತ್ತರ)ದಲ್ಲಿ ಒಟ್ಟು 530 ನಿವೇಶನ ಜೊತೆಗೆ ಆರ್ ಟಿ ನಗರದಲ್ಲಿ 1683 ನಿವೇಶನಗಳ ಹಂಚಿಕೆಗಾಗಿ ಮುಡಾದಿಂದ ಈಗಾಗಲೇ ಅರ್ಜಿ ಕರೆಯಲಾಗಿದೆ. ಅರ್ಜಿದಾರರು ಪ್ರಾರಂಭಿಕ ಠೇವಣಿಯ ಜೊತೆಗೆ ಆಧಾರ ಕಾರ್ಡ್ ಸಲ್ಲಿಸುವುದನ್ನ ಕಡ್ಡಾಯ ಮಾಡಲಾಗಿದ್ದು ಇದರ ಅಂತಿಮ ಪಟ್ಟಿ ಈಗಾಗಲೇ ಸಿದ್ದವಾಗಿದೆ.
ಮುಂದಿನ ದಿನಗಳಲ್ಲಿ ನಿವೇಶನಗಳನ್ನು ವಿತರಣೆ ಮಾಡಲಾಗುತ್ತಿದ್ದು ನಿವೇಶನ ವಿತರಣೆ ಸಂದರ್ಭ ಮುಡಾದಿಂದ ಆಧಾರ್ ಕಾರ್ಡ್ ಗಳನ್ನು ಪಡೆದೇ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಒಬ್ಬರೇ ಒಂದಕ್ಕಿಂತ ಹೆಚ್ಚು ನಿವೇಶನ ಪಡೆಯುವುದನ್ನು ತೆರೆಯುವ ನಿರೀಕ್ಷೆ ಹೊಂದಲಾಗಿದೆ. ಮುಡಾದಲ್ಲಿ 1 ಲಕ್ಷದಷ್ಟು ಅರ್ಜಿಗಳು ನಿವೇಶನ ಹಂಚಿಕೆಗಾಗಿ ಬಾಕಿ ಉಳಿದಿವೆ. ಹೊಸದಾಗಿ ಅರ್ಜಿ ಕರೆದ ಸಂದರ್ಭ ಪ್ರತೀ ಬಾರಿ 50 ಸಾವಿರದಷ್ಟು ಹೆಚ್ಚು ಅರ್ಜಿಗಳು ಸೇರ್ಪಡೆಯಾಗುತ್ತವೆ ಎನ್ನುತ್ತಾರೆ ಮುಡಾ ಅಧ್ಯಕ್ಷ ಡಿ. ಧ್ರುವಕುಮಾರ್.
ಇನ್ನೂ ನಿವೇಶನ, ಮನೆ ಹೊಂದಿರುವವರಿಗೆ ಮುಡಾದಿಂದ ಕಾನೂನಿನಲ್ಲಿ ನಿವೇಶನ ನೀಡಲು ಅವಕಾಶವಿಲ್ಲ. ಈ ಹಿನ್ನಲ್ಲೆಯಲ್ಲಿ ಮುಡಾದಿಂದ ನಿವೇಶನ ವಿತರಣೆಗೆ ಆಧಾರ ಕಾರ್ಡ್ ನ್ನು ಕಡ್ಡಾಯ ಮಾಡಲಾಗಿದೆ. ಅರ್ಜಿದಾರರು ಒಂದಕ್ಕಿಂತ ಹೆಚ್ಚು ನಿವೇಶನ ಹೊಂದಿರುವುದು ಪತ್ತೆಯಾದಲ್ಲಿ ಅಂಥವರಿಗೆ ನಿವೇಶನ ನೀಡಲಾಗುವುದಿಲ್ಲ ಎಂದು ಮುಡಾ ಆಯುಕ್ತ ಡಾ.ಎಂ. ಮಹೇಶ ತಿಳಿಸಿದರು.