News Karnataka Kannada
Friday, May 17 2024
ಮೈಸೂರು

ನಿಯಂತ್ರಣ ತಪ್ಪಿದ ಕಾರು: ಸ್ಥಳದಲ್ಲೇ ವೈದ್ಯ ಸಾವು

Photo Credit :

ನಿಯಂತ್ರಣ ತಪ್ಪಿದ ಕಾರು: ಸ್ಥಳದಲ್ಲೇ ವೈದ್ಯ ಸಾವು

ಮೈಸೂರು: ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವ ವೈದ್ಯರೊಬ್ಬರು ಸ್ಥಳದಲ್ಲೇ ಮೃತಪಟಿರುವ ಘಟನೆ ನಗರದ ಹುಣಸೂರು ರಸ್ತೆಯ ಕಲಾಮಂದಿರದ ಜಲದರ್ಶಿನಿ ಬಳಿ ಭಾನುವಾರ ರಾತ್ರಿ ನಡೆದಿದೆ.

ವೇಗವಾಗಿ ಕಾರು ಚಲಾವಣೆ ಮಾಡಿ ಮೃತಪಟ್ಟ ವೈದ್ಯ ಡಾ.ದರ್ಶನ್(35). ಕುವೆಂಪುನಗರದಲ್ಲಿರುವ ಪ್ರೇರಣಾ ಆಸ್ಪತ್ರೆಯ ಮಾಲೀಕರಾದ ಇವರು ಕೆಲಸ ಮುಗಿಸಿಕೊಂಡು ವಿಜಯನಗರದಲ್ಲಿರುವ ನಿವಾಸಕ್ಕೆ ಮಳೆಯ ನಡುವೆ ವೇಗವಾಗಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ ಕಲಾಮಂದಿರದ ಜಲದರ್ಶಿನಿ ಬಳಿ ಇರುವ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು ದರ್ಶನ್ ಅವರ ತಲೆಯ ಭಾಗಕ್ಕೆ ತೀವ್ರವಾದ ಪೆಟ್ಟಾದ ಕಾರಣ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಸಂಬಂಧ ವಿವಿಪುರಂ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
   

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು