ಮೈಸೂರು: ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನ ಮೀನುಗಾರರು ರಕ್ಷಿಸಿರುವ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ನಡೆದಿದೆ.
ಹೆಮ್ಮಿಗೆ ಸೇತುವೆ ಮೇಲಿಂದ ನದಿಗೆ ಯುವತಿ ಹಾರಿದ್ದನ್ನು ನೋಡಿದ ಅಲ್ಲಿ ಮೀನು ಹಿಡಿಯುತ್ತಿದ್ದ ಯುವಕರು, ತಕ್ಷಣವೇ ಆಕೆಯನ್ನು ನೀರಿನಿಂದ ಮೇಲೆತ್ತಿ, ತಮ್ಮ ತೆಪ್ಪಕ್ಕೆ ಹಾಕಿಕೊಂಡು, ದಡಕ್ಕೆ ಬಂದು, ನದಿಗೆ ಹಾರಿದಕ್ಕೆ ಕಾರಣವನ್ನು ತಿಳಿದುಕೊಂಡು, ಆಕೆಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.
ಈ ದೃಶ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಯುವಕರ ಸಮಯ ಪ್ರಜ್ಞೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗ್ತಿದೆ.